ಅಗ್ನಿಪಥ್ ಯೋಜನೆಗೆ ವಿರೋಧ ಸರಿಯಲ್ಲ:ವಿಕ್ರಂ ಅಯ್ಯಂಗಾರ್

208
Share

 

ಅಗ್ನಿಪಥ್ ಯೋಜನೆಗೆ ವಿರೋಧ ಸರಿಯಲ್ಲ:ವಿಕ್ರಂ ಅಯ್ಯಂಗಾರ್

ದೇಶದ ರಕ್ಷಣೆ ಮತ್ತು ಯುವ ಸಮುದಾಯದ ಭವಿಷ್ಯದ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನ ಕೆಲವರು ರಾಜಕೀಯವಾಗಿ ಪ
ಮತ್ತು ಪ್ರಚಾರದ ತೆವಳಿಗಾಗಿ ವಿರೋಧಿಸುತ್ತಿರುವುದು ಬೇಸರದ ಸಂಗತಿ ಎಂದು
ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಹೇಳಿದರು

ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮಹಾರಾಜ ಕಾಲೇಜು ಯುವರಾಜ ಕಾಲೇಜಿನ ಯುವಕರಿಗೆ ಅಗ್ನಿಪಥ್ ಯೋಜನೆಯ ಉಪಯೋಗಗಳ ಮಾಹಿತಿಯ ಕರಪತ್ರ ನೀಡುವ ಮೂಲಕ ಅಗ್ನಿಪಥ್ ಯೋಜನೆಗೆ ಬೆಂಬಲಿಸಿ ಯುವಕರು ದೇಶ ಸೇವೆಗೆ ಮುಂದಾಗಿ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಯಿತು
ಇದೇ ಸಂಧರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಯುವಕರು
ದೇಶಸೇವೆ ಮಾಡಿ ನಿವೃತ್ತಿಯ ನಂತರ ಎಲ್ಲರಿಗೂ ವಿವಿದೆಢೆ ಉದ್ಯೋಗ ಸಿಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ . ಯಾವ ಹಂತದಲ್ಲೂ ಯುವಕರಿಗೆ ಮೋಸವಾಗುವದಿಲ್ಲ ಕೆಲವರು ಸುಳ್ಳು ಆರೋಪಗಳನ್ನು ನಂಬಲು ಹೋಗಬಾರದು ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಪ್ರಧಾನಿಗಳು ಮಾಡುವುದಿಲ್ಲ .ಆದ್ದರಿಂದ ಯುವಕರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಗೆ ಬೆಂಬಲ ನೀಡಿ ಅರ್ಹತೆ ಪಡೆದಿರುವ ಎಲ್ಲ ಯುವಕರು ಸೈನ್ಯಕ್ಕೆ ಸೇರಿ ಎಂದು ಕರೆ ನೀಡಿದರು

ನಂತರ ಮಾತನಾಡಿದ ಪ್ರಜ್ಞಾವಂತ ನಾಗರಿಕ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ
ಅನ್ಯ ರಾಷ್ಟ್ರಗಳಲ್ಲೂ ಸಹ ಇಪ್ಪತ್ತುವರ್ಷ ತುಂಬಿದ ಪ್ರತಿಯೊಬ್ಬ ಯುವಕರು 2ವರ್ಷ ಸೈನಿಕ ಶಿಕ್ಷಣ ಪಡೆಯುವುದು ಕಡ್ಡಾಯವಾಗಿದೆ, ನಮ್ಮ ದೇಶದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ವಿವಿಧ ಉದ್ಯೋಗಕ್ಕೆ ಮೀಸಲಾತಿ ನೀಡುತ್ತಾರೆ ಶ್ಲಾಘನೀಯ, ಪ್ರತಿಯೊಬ್ಬ ಭಾರತೀಯನಿಗೂ ಮೊದಲು ದೇಶ ಸಂರಕ್ಷಣೆ ವಿಚಾರಕ್ಕೆ ಕೈಜೋಡಿಸಬೇಕು ಆದರೆ ರಾಜಕೀಯ ಪ್ರಚಾರ ತೆವಳಿಗಾಗಿ ವಿರೋಧಿಸುವುದು ಒಳ್ಳೆಯ ಬೆಳವಣಿಗೆಯಲ್ಲ, 17.5ವರ್ಷ ತುಂಬಿದವರೂ ಆನ್ಲೈನ್ ಮುಖಾಂತರ ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸಬಹುದು,
ಸಿಆರ್ ಪಿಎಫ್ ಹಾಗೂ ಅಸ್ಸಾಂ ರೈಫಲ್ ನಲ್ಲಿ ಅಗ್ನಿ ವೀರ್ ಗಲ್ಲಿಗೆ
ಶೇಕಡಾ 10% ಹುದ್ದೆಗಳನ್ನು ಕಾಯ್ದಿರಿಸಲಾಗಿದೆ .ಆಯಾಯ ರಾಜ್ಯ ಸರ್ಕಾರಗಳು ಸಹ ಪೊಲೀಸ್ ನೇಮಕಾತಿಯಲ್ಲಿ ನಿವೃತ್ತಿ ಸೈನಿಕರಿಗೆ ಪ್ರಥಮ ಆದ್ಯತೆ ನೀಡಲು ಮುಂದಾಗಿವೆ .ಆದ್ದರಿಂದ ಅಗ್ನಿಪಥ್ ಯೋಜನೆ ದೇಶ ಸೇವೆ ಮಾಡಲಿಕ್ಕೆ ಯುವ ಜನಾಂಗಕ್ಕೆ ಸಿಕ್ಕಿರುವ ಒಳ್ಳೆಯ ಸಮಯ ಸದ್ಭಳಕೆ ಮಾಡಿಕೊಳ್ಳುವಲ್ಲಿ ಯುವಕರು ಮುಂದಾಗಬೇಕಿದೆ. ಆದ್ದರಿಂದ ಕೂಡಲೇ ಅರ್ಹತೆ ಪಡೆದಿರುವ ಯುವಕರು ಸೈನ್ಯಕ್ಕೆ ಸೇರಲು ಯುವಕರು ಸನ್ನದ್ಧರಾಗಿ ಎಂದು ಯುವಕರಲ್ಲಿ ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ,ಪ್ರಜ್ಞಾವಂತ ನಾಗರಿಕ ವೇದಿಕೆಯ ಅಜಯ್ ಶಾಸ್ತ್ರಿ ,ಗೋಪಾಲ್, ಸುಚೀಂದ್ರ ,ಚಕ್ರಪಾಣಿ ,ಸುರೇಶ್ ,ಹಾಗೂ ಇನ್ನಿತರರು ಹಾಜರಿದ್ದರು


Share