ಕರೋನಾ ಸೋಂಕಿನಿಂದ ಬಳಲಿ ಬೆಂಡಾದ ಜನತೆ ಅದರಲ್ಲೂ ವಿದ್ಯಾರ್ಥಿಗಳಿಗೆ ಇದೀಗತಾನೆ ಶಾಲಾ ಕಾಲೇಜುಗಳು ಪ್ರಾರಂಭಗೊಂಡು ಎಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ತೊಡಗುತ್ತಿರುವುದು ಒಂದೆಡೆಯಾದರೆ.
ಪಟ್ಟಭದ್ರ ಹಿತಾಸಕ್ತಿಗಳು ಇದೀಗ ವಿದ್ಯಾರ್ಥಿಗಳಲ್ಲಿ ಗೊಂದಲ ಏರ್ಪಡಿಸಿ ಶಾಂತಿ ಕದಡಲು ಹೊರಟಿರುವ ಹುನ್ನಾರ ಎಷ್ಟರ ಮಟ್ಟಿಗೆ ಸರಿ?ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಅವರಿಗೆ ತಂದೆ ತಾಯಿಯರೇ ಗುರುಗಳು ಹಾಗಿದ್ದ ಮೇಲೆ ಮಕ್ಕಳನ್ನು ತಿದ್ದಿ ಬುದ್ದಿ ಹೇಳುವ ಬದಲು ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ಕೊಡುತ್ತಾ ಮಕ್ಕಳನ್ನು ಸಂಕಷ್ಟಕ್ಕೆ ದೂಡುತ್ತಿರುವುದಕ್ಕೆ ಹಿರಿಯರೇ ನೇರ ಹೊಣೆ ಮೊದಲು ಇವರಿಗೆ ಶಿಕ್ಷೆಯಾಗಬೇಕು,
ಶಾಲಾ ಮಕ್ಕಳುಗಳಲ್ಲಿ ಭೇದಭಾವ ಕೀಳರಿಮೆ ಇರಬಾರದು ಎಂಬ ಒಂದೇ ಕಾರಣಕ್ಕೆ ಸಮವಸ್ತ್ರ ಧಾರಣೆ ಮೊದಲಿನಿಂದಲೂ ನಡೆದು ಬಂದಿರುವ ವ್ಯವಸ್ಥೆ.
ಈಗ ಈ ಸಮವಸ್ತ್ರ ಧಾರಣೆಗೆ ವಿವಿಧ ಬಣ್ಣ ಕಟ್ಟಿ ಅಶಾಂತಿಗೆ ಕಾರಣವಾಗಿರುವ ವಿಷಯವನ್ನು ಮನಗಂಡು ವಿದ್ಯಾರ್ಥಿಗಳೇ ಎಚ್ಚರ ವಹಿಸಬೇಕಾಗಿದೆ ಎಂಬ ವಿಷಯವಾಗಿ ಇಂದಿನ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಮೂಡಿ ಬಂದಿದೆ.