MP ವಾಚಕರ ಪತ್ರ – ತುಂಬಾ ನಿರಾಸೆಯಾಯಿತು

190
Share

ವಾಚಕರ ಪತ್ರ ,

ಮಾನ್ಯರೆ ಪ್ರಕಟಣೆಯ ಕೃಪೆಗಾಗಿ –

ತುಂಬಾ ನಿರಾಸೆಯಾಯಿತು

ಮೊನ್ನೆ ದಿನ ಮೈಸೂರಿಗೆ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ಭೇಟಿ ಮಾಡುತ್ತಾರೆಂದು ಕೇಳಿ ತುಂಬ ಸಂತೋಷವಾಗಿತ್ತು. ಅವರನ್ನು ನೋಡಬೇಕೆಂದು ಸುಮಾರು 3 ಗಂಟೆಗಳ ಕಾಲ ಮುಂಚಿತವಾಗಿಯೇ ನೂರಡಿ ರಸ್ತೆಯಲ್ಲಿ ಹೋಗಿ ಕಾದು ಕುಳಿತಿದ್ದೆವು. ನಮ್ಮ ಪ್ರಧಾನಿಯವರು ಬಂದರು ಆದರೆ ಅಲ್ಲಿ ಆದ ನಿರಾಸೆಯೆಂದರೆ ಅವರು ಕುಳಿತು ಚಲಿಸುತ್ತಿದ್ದ ವಾಹನವು ಕ್ಷಣಮಾತ್ರದಲ್ಲಿ ಹೊರಟು ಹೋಯಿತು . ವಾಹನವು ನಿಧಾನವಾಗಿ ಚಲಿಸಿದ್ದರೆ ಎಲ್ಲರಿಗೂ ಚೆನ್ನಾಗಿ ಕಾಣುತ್ತಿತ್ತು ಮತ್ತು ಎಲ್ಲರಿಗೂ ತುಂಬಾ ಸಂತೋಷವೂ ಆಗುತ್ತಿತ್ತು .
ಗಂಟೆಗಟ್ಟಲೆ ಕಾದು ಕುಳಿತ ನಮ್ಮಂತವರಿಗೆ ಭಾರಿ ನಿರಾಸೆಯುಂಟಾಯಿತು.
ಕಲ್ಪನ
ಮೈಸೂರು


Share