ಆಶಾ ಕಾರ್ಯಕರ್ತೆಯರ ನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಲು, ಅಗ್ರಹ.

ಸರ್ಕಾರಿ ನೌಕರರೆಂದು ಪರಿಗಣಿಸಿ’

ದೇಶಕ್ಕೆ ಕೊರೊನಾ ಕಾಲಿಟ್ಟಾಗಿನಿಂದ ವಿಶ್ರಾಂತಿ ಪಡೆಯದೆ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಸರ್ಕಾರಕ್ಕೆ ಮನವಿ

ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ರೋಗ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯವಾದುದ್ದು. ಸರ್ಕಾರ ಈ ಕೂಡಲೇ ಇವರ ಸೇವೆಗಳನ್ನು ಗುರುತಿಸಿ ಸರ್ಕಾರದ ಹಲವು ಸವಲತ್ತುಗಳನ್ನು ನೀಡಬೇಕು ,

ಮುಖ್ಯಮಂತ್ರಿಗಳು ಈ ಕುರಿತು ಗಂಭಿರ ಚಿಂತನೆ ನಡೆಸಿ ಆಶಾ ಕಾರ್ಯಕರ್ತೆರನ್ನು ಕಾಯಂಗೊಳಿಸಬೇಕು, ಮಾಸಿಕ ಕನಿಷ್ಟ ₹15 ಸಾವಿರ ವೇತನ ನೀಡಬೇಕು, ₹50 ಲಕ್ಷ ಜೀವ ವಿಮೆ ಸೌಲಭ್ಯ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು

ಇಂತಿ
ವಿಕ್ರಂ ಅಯ್ಯಂಗಾರ್ ಸಾಮಾಜಿಕ ಹೋರಾಟಗಾರರು