ಕೊರೋನಾ, 29 ಮಂದಿ ಮೇಲೆ ಎಫ್ಐಆರ್ ದಾಖಲು ಜಿಲ್ಲಾಧಿಕಾರಿ.

ಮೈಸೂರು ,ನಗರ ಹಾಗೂ ಜಿಲ್ಲೆಯಲ್ಲಿ ಮನೆ Qurantine ಉಲ್ಲಂಘಿಸಿದವರ 29 ಮಂದಿಗಳ ವಿರುದ್ಧ ಎಫ್ಐಆರ್ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಜಾಥಾ ಮೆರವಣಿಗೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಧಿಕಾರಿಗಳು ಹೋದಾಗ ಮನೆಯಲ್ಲಿ ವ್ಯಕ್ತಿಗಳು ಇಲ್ಲದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಸಾರ್ವಜನಿಕರಿಗೆ ತಿಳಿಸುವ ಘಟ್ಟ ಈಗಾಗಲೇ ಮುಗಿದಿದ್ದು ಈಗ ನಾವು ಮಾಡುತ್ತೇವೆ ಎಂದು ಕಡಕ್ ಎಚ್ಚರಿಕೆಯನ್ನು ಅವರು ನೀಡಿದ್ದಾರೆ

. ನಗರದ ಅಗ್ರಹಾರ ವೃತ್ತದಲ್ಲಿ Mask ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳು ಹಾಗೂ ಮೈಸೂರು ನಗರದ ಮೇಯರ್ ಚಾಲನೆ ನೀಡಿದರು.