ಚಾಮರಾಜ ಕ್ಷೇತ್ರದ ಶಾಸಕರಿಂದ ಗುದ್ದಲಿ ಪೂಜೆ

ಮೈಸೂರು . ಶಾಸಕರ ಎಸ್.ಎಫ್.ಸಿ ಅನುದಾನದಲ್ಲಿ ಕೈಗೊಂಡಿರುವ ಕೆಳಕಂಡ ಕಾಮಗಾರಿಗಳ ಚಾಲನೆಗಾಗಿ ಭೂಮಿ ಪೂಜಾ ಕಾರ್ಯಕ್ರಮಗಳನ್ನು ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ವಾರ್ಡ ನಂ-42 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು.

  1. * ವಾರ್ಡ್ ನಂ-42 ರ ಕೆ.ಜಿ.ಕೊಪ್ಪಲಿನ 1ನೇ 4ನೇ ಕ್ರಾಸ್ ರಸ್ತೆಗಳಿಗೆ ಕಾಂಕ್ರಿಟ್ ರಸ್ತೆ & ಆರ್.ಸಿ.ಸಿ ಡೆಕ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿಯ ಮೊತ್ತ ರೂ 25.00 ಲಕ್ಷಗಳ* ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಾಯಿತು.
  2. ನಂ-42 ರ ಕಾಂತರಾಜು ಅರಸು ರಸ್ತೆಯ ಅಗ್ನಿಶಾಮಕ ಕಟ್ಟಡದ ಮುಂಬಾಗ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯ ಮೊತ್ತ ರೂ 15.00 ಲಕ್ಷಗಳ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಈ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ವಾರ್ಡ್ ನಂ-42 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶಿವಕುಮಾರ್, ಶ್ರೀ ಬಲರಾಮ್, ಶ್ರೀ ದೇವರಾಜ್, ಶ್ರೀ ರವಿ, ಚಾಮರಾಜ ಕ್ಷೇತ್ರದ ಭಾ.ಜ.ಪ ಪ್ರಧಾನ ಕಾರ್ಯದಶಿ೵ ಶ್ರೀ ಪುನೀತ್, ಶ್ರೀ ರವಿಗೌಡರವರು, ಶ್ರೀ ಬಸವಣ್ಣ, ಶ್ರೀ ಕೃಷ್ಣಪ್ಪ, ಶ್ರೀ ಚನ್ನಪ್ಪರವರು, ಶ್ರೀ ಶಂಭಣ್ಣ, ಶ್ರೀಮತಿ ಜ್ಯೋತಿ, ಕೆ.ಜಿ.ಕೊಪ್ಪಲು ಗ್ರಾಮಸ್ಥರು ಹಾಗೂ ಮಮತ ಮುಂತಾದವರು ಹಾಜರಿದ್ದರು.
99002-21199