ಬೆಂಗಳೂರು, ಲಾಕ್ಡೌನ್ ಮಾಡಿ ಜೀವ ಉಳಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯರ ಆಗ್ರಹ

ಬೆಂಗಳೂರು,

ನಗರದಲ್ಲಿ ಕೋರೋನ ರೋಗ ನಿಯಂತ್ರಿಸಲು ಕೂಡಲೇ ಲಾಕ್ಡೌನ್ ಮಾಡಿ ಎಂದು ಪಾಲಿಕೆ ಸದಸ್ಯರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
15 ದಿನ ಲಾಕ್ಡೌನ್ ಮಾಡಿ ಜೀವ ಉಳಿಸಿ ಎಂದು ಮುಖ್ಯಮಂತ್ರಿಯನ್ನು ಆಗ್ರಹಿಸಿರುವ ಕಾಂಗ್ರೆಸ್ ಪಕ್ಷದವರು ಲಾಕ್ಡೌನ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ನಾಗರೀಕರಿಗೆ ರೇಷನ್ ನೀಡಿ ಹಾಗೂ ಮನೆ ಬಾಡಿಗೆ ರಿಯಾಯಿತಿ ನೀಡಿ ಎಂದು ಒತ್ತಾಯಿಸಿದ್ದಾರೆ.