ಬೆಂಗಳೂರು ,ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಭೆ ಕರೆದಿದ್ದಾರೆ.
ಇಂದಿನಿಂದ ಬೆಂಗಳೂರು ನಗರದ ವಲಯವಾರು ಸಭೆಯನ್ನು ಮುಖ್ಯಮಂತ್ರಿಗಳ ಗೃಹಕಚೇರಿ ನಿವಾಸದಲ್ಲಿ ನಡೆಯುತ್ತಿದ್ದು ಇಂದು ಆರ್ ಆರ್ ನಗರದ ವಲಯವಾರು ಸಭೆಯನ್ನು ಕರೆಯಲಾಗಿದೆ.
ಸಚಿವ ಸೋಮಶೇಖರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂದಿನ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ದೂರು ಬರದಂತೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದ್ದಾರೆ.