ಮೈಸೂರು: ಶ್ರಾವಣ ಶನಿವಾರ ಎಲ್ಲಾ ದೇವಸ್ಥಾನ ಬಂದ್ ಡಿಸಿ ಪ್ರಕಟ.

ಶ್ರಾವಣ ಶನಿವಾರಗಳಂದು ದೇವಾಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು.ಜುಲೈ.23.(ಕರ್ನಾಟಕ ವಾರ್ತೆ):- ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಮನೆ ಮುಜರಾಯಿ ಸಂಸ್ಥೆಗಳಲ್ಲಿ ಒಂದಾದ ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನ, ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವಾಲಯ ಹಾಗೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮತ್ತು ಖಾಸಗಿ ಆಡಳಿತ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಶ್ರಾವಣ ಮಾಸದ ಶನಿವಾರಗಳಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಆದೇಶ ಹೊರಡಿಸಿದ್ದಾರೆ.
ಜುಲೈ 25, ಆಗಸ್ಟ್ 1, ಆಗಸ್ಟ್ 8 ಮತ್ತು ಆಗಸ್ಟ್ 15 ರಂದು ದೇವಾಲಗಳಿಗೆ ಭಕ್ತಾದಿಗಳಿಗೆ ಪ್ರವೇಶ, ದೇವಾಲಯದಿಂದ ಜರುಗುವ ಎಲ್ಲಾ ಸೇವೆಗಳು, ಜಾತ್ರೆ, ಉತ್ಸವಗಳನ್ನು ರದ್ಧುಗೊಳಿಸಿದ್ದು, ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಒಳಭಾಗದಲ್ಲಿ ಅರ್ಚಕರು ಮತ್ತು ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ನಡೆಸಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.