ವಿಶ್ವನಾಥ್ ಅವರಿಗೆ ಅಭಿನಂದನೆ

ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿ ಸರ್ಕಾರವೂ ಮಾಜಿ ಸಚಿವರು ಹಾಗೂ ಸಾಹಿತಿಗಳಾದ ಹೆಚ್. ವಿಶ್ವನಾಥ್ ರವರನ್ನು ನೂತನವಾಗಿ ನೇಮಕ ಮಾಡಿರುವುದನ್ನು ಸ್ವಾಗತಿಸಿ ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆಯ ವತಿಯಿಂದ ಅಗ್ರಹಾರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಲಾಯಿತು, ಮಾಜಿ ನಗರಪಾಲಿಕೆ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಕೇಬಲ್ ಮಹೇಶ್, ಅಜಯ್ ಶಾಸ್ತ್ರಿ, ಪ್ರಜ್ಞಾವಂತ ನಾಗರೀಕರ ವೇದಿಕೆಯ ಕಡಕೊಳ ಜಗದೀಶ್, ಹರೀಶ್ ನಾಯ್ಡು, ರಾಕೇಶ್ ಕುಂಚಿಟಿಗ, ಪ್ರದೀಪ್ ಮಧು ಪೂಜಾರ್, ದೀಪಕ್, ಸುಚೀಂದ್ರ, ಚಕ್ರಪಾಣಿ ಇನ್ನಿತರರು ಇದ್ದರು