ಬೆಂಗಳೂರು ಶನಿವಾರ ಲಾಕ್ಡೌನ್ ಇಲ್ಲ ಆದರೆ ಮುಖ್ಯಮಂತ್ರಿ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಕೊರಾನಾ ಉಸ್ತುವಾರಿ ವಹಿಸಿರುವ ಕಂದಾಯ ಸಚಿವ ಅಶೋಕ್ ಅವರು ಸ್ಪಷ್ಟಪಡಿಸಿದ್ದಾರೆ ಇಂದು ನಡೆದ ಸಭೆಯಲ್ಲಿ ಶನಿವಾರ ಲಾಕ್ಡೌನ್ ಬಗ್ಗೆ ಪ್ರಸ್ತಾಪ ಆಗಿಲ್ಲ ಅಂತ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ತಾವು ಹಲವಾರು ಸಭೆಗಳು ನಡೆಸಿದ್ದರು ಶನಿವಾರದ ಲಾಕ್ ಡೌನ್ ಬ ಗ್ಗೆ ಇಲ್ಲಿಯವರೆಗೆ ಚರ್ಚೆಯಾಗಿಲ್ಲ ,ಪ್ರಸ್ತಾಪ ಬಂದಿಲ್ಲ ಎಂದು ಕೂಡ ಅವರು ಅಶೋಕ್ ಅವರು ತಿಳಿಸಿದರು.
ಗೃಹಸಚಿವ ಅಶ್ವಥ್ ನಾರಾಯಣ ಅವರು ಕೂಡ ಶನಿವಾರ ಲಾಕ್ಡೌನ್ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ ಆದರೆ ಬುಧವಾರದವರೆಗೂ ಯಾವುದೇ ರೀತಿ ಲಾಕ್ಡೌನ್ ಬಗ್ಗೆ ಪ್ರಸ್ತಾವನೆ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.