ಸರ್ಕಾರ ಗಮನಿಸಬೇಕು

ಮೈಸೂರು,

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿ ರಾಜ್ಯದಲ್ಲಿ ಯಾವುದೇ ಕೈಗಾರಿಕೆ ಸ್ಥಾಪನೆ ಆಗದೆ ಹಾಗೆಯೇ ಉಳಿದಿದೆ ಇಷ್ಟೆಲ್ಲಾ ಇದ್ದರೂ ಕೃಷಿ ಯೋಗ್ಯ ಭೂಮಿಯನ್ನು ಹಣವುಳ್ಳವರಿಗೆ ಖರೀದಿಸಲು ಕಾಯ್ದೆ ರೂಪಿಸಲು ಹೊರಟಿರುವುದು ಈಗಿನ ಸರ್ಕಾರದ ಸಂಪುಟದ ಮಂತ್ರಿಗಳು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕಾಯ್ದೆಯನ್ನು ಜಾರಿ ಮಾಡಲು ಹೊರಟರೆ ಕರ್ನಾಟಕದಾದ್ಯಂತ ಇಲ್ಲ ರೈತರ ದಲಿತಪರ ಜನಪರ ಸಂಘಟನೆಗಳೆಲ್ಲ ಸೇರಿ ಚಳುವಳಿ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು