ಹಸಿರು ಲೋಕ
ದಿ. ಅನಂತ್ ಕುಮಾರ್ ರವರ
61ನೇ ವರ್ಷದ ಹುಟ್ಟುಹಬ್ಬ ಆಚರಣೆ ಅಂಗವಾಗಿ
ಪರಿಸರಪ್ರೇಮಿ ಹಸಿರು ಭಾನುವಾರ ರೂವಾರಿ, ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ರವರ 61ನೇ ವರ್ಷದ ಜಯಂತಿಯ ಅಂಗವಾಗಿ ಪರಿಸರ ಸ್ನೇಹಿ ತಂಡದ ವತಿಯಿಂದ ಇಂದು
ಜ್ಯೋತಿ ನಗರದಲ್ಲಿರುವ ಪೊಲೀಸ್ ಕ್ವಾರ್ಟ್ರಸ್ ನಲ್ಲಿರುವ ಉದ್ಯಾನವನದಲ್ಲಿ “ಹಸಿರು ಉಸಿರು” ಎಂಬ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ಚಾಲನೆ ನೀಡಿದರು, ಸ್ಥಳದಲ್ಲಿಯೇ ನಿವಾಸಿಗಳಿಗೆ ಸಸಿಯ ರಕ್ಷಣೆ ಮತ್ತು ಪೋಷಣೆಯ ಜವಬ್ದಾರಿಯನ್ನು ಸಹ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್
ಮಾತನಾಡಿ ದೇಶದಲ್ಲಿ ಯುವಕರು ವಿದ್ಯಾವಂತರಾಗಬೇಕು ಮತ್ತು ಸಸಿಗಳು ಮರಗಳಾಗಿ ಬೆಳೆದು ನಿಂತರೇ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಇದರ ಸಂದೇಶವನಿಟ್ಟುಕೊಂಡು ಯುವಕರ ತಂಡದೊಂದಿಗೆ ಪ್ರತಿಭಾನುವಾರ ಸಸಿ ನೆಡುವ ಮೂಲಕ ಹಸಿರುಭಾನುವಾರ ಸ್ಥಾಪಿಸಿದವರು ಕೇಂದ್ರದ ಮಾಜಿ ಸಚಿವರಾದ ಅನಂತಕುಮಾರ್ ರವರು, ಆರ್ಥಿಕವಾಗಿ ಹಿಂದುಳದ ಮಕ್ಕಳಿಗೆ ಅಕ್ಷರ-ಅನ್ನ-ಆರೋಗ್ಯ ಪ್ರತಿಯೊಬ್ಬ ಮಗುವಿಗೂ ಅವಶ್ಯಕವಿದ್ದ ಸಂಧರ್ಭದಲ್ಲಿ ಅದಮ್ಯಚೇತನದ ಮೂಲಕ ಲಕ್ಷಾಂತರ ಮಕ್ಕಳಿಗೆ ಅನ್ನದಾಸೋಹ, ಅಕ್ಷರಭ್ಯಾಸ ಕಲಿಕಾ ಕೇಂದ್ರಗಳು ಸ್ಥಾಪನೆ ಮತ್ತು ಹೃದ್ರೋಗ ಚಿಕಿತ್ಸೆಗಾಗಿ ಅತಿಕಡಿಮೆ ಬೆಲಯಲ್ಲಿ ವೈದ್ಯಕೀಯ ಸಲಕರಣೆಗಳನ್ನು ತಂದ ಕೀರ್ತಿ ಅನಂತಕುಮಾರ್ ರವರಿಗೆ ಸಲ್ಲುತ್ತದೆ, ರಸಗೊಬ್ಬರ ಸಚಿವರಾಗಿದ ಸಂಧರ್ಭದಲ್ಲಿ ರೈತರಿಗೆ ರಾಸಾಯನಿಕ ರಹಿತ ಬೇವು ಲೇಪಿತ ರಸಗೊಬ್ಬರ ವಿತರಣೆ ಯೋಜನೆ ದೇಶದಲ್ಲಿ ಜಾರಿಗೆ ತಂದರು, ಕಳೆದ ಆರೇಳು ವರ್ಷಗಳಿಂದ ಹಸಿರುಭಾನುವಾರ ಯೋಜನೆ ಬೆಂಗಳೂರಿನಲ್ಲಿ ಸಹಸ್ರಾರು ಸ್ವಯಂಪ್ರೇರಿತರು ಲಕ್ಷಾಂತರ ಗಿಡಗಳನ್ನು ನೆಟ್ಟು ಹಸಿರು ಬೆಂಗಳೂರು ಮಾಡಲು ಶ್ರಮಿಸಿದ್ದಾರೆ, ಇತ್ತೀಚಿನ ದಿಗಳಲ್ಲಿ ನಾವು ಜೀವಿಸುವುದಕ್ಕೆ ಮೆನೆಕಟ್ಟಿಕೊಳ್ಳುತ್ತೇವೆ ಆದರೆ ಸಣ್ಣಪಕ್ಷಿ ಪ್ರಾಣಿಗಳ ಬದುಕು ಮರ ಗಿಡಗಳಲ್ಲೇ ಹಾಗಾಗಿ ಸಸಿಗಳನ್ನು ಬೆಳಸಬೇಕಾಗಿದೆ, ಮತ್ತು ಮೈಸೂರು ನಗರವನ್ನು ಹಸಿರು ವಲಯವನ್ನಾಗಿ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಣೆ ರಕ್ಷಣೆ ಪರಿಸರ ಮನೋಭಾವ ಬೆಳಸಿಕೊಳ್ಳಬೇಕು, ಇಂದಿನ ದಿನಗಳಲ್ಲಿ ಮಾಲಿನ್ಯ ಮುಕ್ತ ಮತ್ತು ತಾಪಮಾನ ನಿಯಂತ್ರಣಕ್ಕಾಹಿ ಪರಿಶುದ್ಧ ಗಾಳಿ ನೆರಳು ಅವಶ್ಯಕ ಹಾಗಾಗಿ ನಮ್ಮ ಮನೆಗಳ ಮುಂದೆ ಸಸಿಗಳನ್ನು ನೆಡಬೇಕು ಮನೆಯ ಸುತ್ತಮುತ್ತ ಅಥವಾ ಮೇಲ್ಚಾವಣಿಯ ತಾರಸಿಯಲ್ಲಿ ಕುಂಡಗಳಲ್ಲಿ ಗಿಡಗಳನ್ನು ಇಟ್ಟರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಾಹುದು ಎಂದರು
ಇದೇ ಸಂದರ್ಭದಲ್ಲಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ , ಎನ್.ಆರ್.ಯುವ ಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ಮೈಸೂರು ನಗರ ಎಸ್ಸಿ.ಮೋರ್ಚಾ ಕಾರ್ಯದರ್ಶಿ ಕೀರ್ತಿ ಕುಮಾರ್ ಮುಖಂಡರಾದ ಕಿರಣ್ ಕುಮಾರ್ ಗೌಡ ನವೀನ್ ಶೆಟ್ಟಿ ,ರಾಜುಹಾಗೂ ತಂಡದ ಸದಸ್ಯರಾದ,ದಿಲೀಪ್,ಕಿಶೋರ್,ನಾಗರಾಜು,ರವಿ ಕುಮಾರ್,ವಿನೋದ್ ಕುಮಾರ್,ಹರ್ಷ,ಜಯಂತ್