ಎಂಪಿ ಕವನ ಸಂಗ್ರಹ :ಕರುನಾಡು – ರಾಮ್

54
Share

 

*ಕರುನಾಡು…….!*

ಸಜ್ಜನರ‌ ಗೂಡಿದು ಕರುನಾಡು ಕಲ್ಲೊಡೆಯದಿರಿ…..!
ಸಂಸ್ಕೃತಿಯ ಬೀಡಿದು ಸುಸಂಸ್ಕೃತರಾಗಿರಿ.

ವೈಭವಭರಿತ ಸ್ವರ್ಗವಿದು,
ಕಿಚ್ಚು ಹಚ್ಚದಿರಿ,
ಕನ್ನಡ ಭಾಷೆಯದು ಸುಂದರ, ಸುಮಧುರ,
ಭಾವನೆಯ ಕೆಣಕದಿರಿ.

ಅತಿಥಿದೇವೋಭವವೆಂಬ ಮೂಲ ಮಂತ್ರದ ಬೀಡಿದು,
ತಂತ್ರ ಕುತಂತ್ರಕ್ಕೆ ಮಣಿಯದ ಕೆಚ್ಚದೆಯ ಗಂಡುಗಲಿಗಳ ನೆಲೆವೀಡಿದು.

ನಮ್ಮನೆಯ ಅತಿಥಿಗಳೇ, ನಮ್ಮತನವನ್ನು ಗೌರವಿಸಿ
ನಮ್ಮಯ ಭಾಷೆಯ ಪ್ರೀತಿಸಿ ಸೌಹಾರ್ದತೆಯಿಂದ ಜೀವಿಸಿ.

*ಜೈ ಕನ್ನಡ ನಾಡು……….*

*ರಾಮ್ ಮೈಸೂರು*


Share