ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ ಜಯಂತಿ

74
Share

 

 

*ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ ಜಯಂತಿ*

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ‌ ಜಯಂತಿ ಅಂಗವಾಗಿ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಪರಶುರಾಮ ಜಯಂತಿಯನ್ನು ಆಚರಿಸಲಾಯಿತು

ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ. ಟಿ. ಪ್ರಕಾಶ್ ರವರು ಪರಶುರಾಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು, ಇದೇ ಸಂಧರ್ಭದಲ್ಲಿ ಡಿ. ಟಿ. ಪ್ರಕಾಶ್ ರವರು ಮಾತನಾಡಿ ನಮ್ಮ‌ ಹಿಂದೂ‌ ಪಂಚಾಂಗದ ಪ್ರಕಾರವಾಗಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನ ಪರಶುರಾಮ‌ ಜಯಂತಿ ಎಂದು ಆಚರಿಸಲಾಗುತ್ತದೆ, ಪರಶುರಾಮರು ಭಗವದ್ ವಿಷ್ಣುವಿನ ಆರನೇ ಅವತಾರ ಎಂಬ ಪ್ರತೀತಿಯಿದೆ. ಉತ್ತರಭಾರತದಲ್ಲಿ ಪರಶುರಾಮರಿಗೆ ಕೋಟ್ಯಾಂತರ ಭಕ್ತ ಸಮೂಹವಿದ್ದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸುತ್ತಾರೆ. ಪಿತೃವಾಕ್ಯ ಪರಿಪಾಲಕ ಎಂದು ಪರಶುರಾಮರನ್ನ ಕರೆಯಲ್ಪಡಲಾಗುತ್ತದೆ, ಪರಶುರಾಮರು ವಿಷ್ಣುವಿನ ಆರನೆಯ ಅವತಾರ ಸಪ್ತರ್ಷಿ ಜಮದಗ್ನಿಯ ಪುತ್ರನಾದ ಪರಶುರಾಮರು ತ್ರೇತಾಯುಗದ ಕೊನೆಯಲ್ಲಿ ಅವತಾರ ತಾಳಿದರು ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ‌ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ವಿಜಯ್ ಕುಮಾರ್, ಪ್ರಶಾಂತ್, ವೆಂಕಟರಾಮ್, ಜೈ ಶ್ರೀ ರಾಮ್ ಯುವ ಬ್ರಿಗೇಡ್ ಅಧ್ಯಕ್ಷರಾದ ಮಹೇಶ್ ಕುಮಾರ್, ಸಂದೇಶ್ ಕುಮಾರ್, ಇನ್ನಿತರರು ಇದ್ದರು


Share