ಔಷಧಿ ಖರೀದಿಗಾಗಿ ವಯೋವೃದ್ದರಿಗೆ ಆರ್ಥಿಕ ಸಹಾಯ.

317
Share

ಶ್ರೀ ಶಾರದಾ ತ್ರಿಶಾಖಾ ವಿಪ್ರ ಬಳಗದ ವತಿಯಿಂದ ಶಾರದಾದೇವಿನಗರ ಬಡಾವಣೆಯಲ್ಲಿ ವಾಸವಿರುವ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್, ಹಾಗೂ ಔಷಧಿ ಖರೀದಿಗಾಗಿ ವಯೋವೃದ್ದರಿಗೆ ಆರ್ಥಿಕ ಸಹಾಯವನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ರವರು ಭಾಗವಹಿಸಿ ಕಿಟ್ ವಿತರಿಸಿ ಮಾತನಾಡಿ “ಬಡತನದಲ್ಲಿರುವ ಬ್ರಾಹ್ಮಣರು ಸ್ವಾಭಿಮಾನದ ಚೌಕಟ್ಟಿನಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡು ಸಂಕಷ್ಟದಲ್ಲಿಯೂ ಯಾರ ಬಳಿ ಸಹಾಯ ಯಾಚಿಸದೇ ಕಷ್ಟದಲ್ಲಿಯೇ ದಿನ ದೂಡುತ್ತಿದ್ದಾರೆ. ಕೆಲವರಂತೂ ಕಿಟ್ ಪಡೆಯುವ ಬಂಧುಗಳನ್ನು ನೋಡಿ ಕಠಿಣ ಮಾತುಗಳಿಂದ ಕಾಲೆಳೆಯುವ ಕೆಲಸ ಮಾಡುತ್ತಾರೆ. ಆದರೆ ಈ ಸಮಯದಲ್ಲಿ ಯಾರೂ ಯಾವುದನ್ನು ಲೆಕ್ಕಿಸದೇ ತಮ್ಮ ಅಗತ್ಯತೆಗಳಿಗಾಗಿ ಸಂಘ-ಸಂಸ್ಥೆಗಳ ನೆರವನ್ನು ಪಡೆಯಿರಿ ಮತ್ತು ಸಂಕಷ್ಟದ ದಿನಗಳಲ್ಲಿ ಮಾಡಿದವರನ್ನು ಮುಂದೆ ಸಂತೋಷದ ದಿನಗಳಲ್ಲಿಯೂ ನೆನೆಯಿರಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಶಾರದಾ ತ್ರಿಶಾಖಾ ವಿಪ್ರ ಬಳಗದ ಅಧ್ಯಕ್ಷರಾದ ವೇ।ಬ್ರ। ಶ್ರೀಧರಶರ್ಮಾ, ಬಿಜೆಪಿ ಮುಖಂಡರಾದ ಬಿ.ಎಂ.ರಘು, ರಾಕೇಶ್ ಭಟ್, ಹೊಯ್ಸಳ ಕರ್ನಾಟಕ ಸಂಘದ ರಂಗನಾಥ,ಜಯಸಿಂಹ, ಸಾಗರ್ ಬಳಗದ ದಯಾಶಂಕರ್, ಪ್ರಭಾಕರ್, ಶ್ರೀನಿವಾಸ್, ಅಮಿತ್ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.


Share