ಕಬಿನಿ ನೀರು ಸರಬರಾಜು ಮಾಡುವ ಕಾಮಗಾರಿಯ ಸ್ಥಳ ಪರಿವೀಕ್ಷಣೆ

221
Share

ಮೈಸೂರು, ನಗರಾಭಿವೃದ್ಧಿ ಪ್ರಾಧಿಕಾರ ರವರು ಆರ್.ಟಿ.ನಗರ ಬಡಾವಣೆಗೆ ಕಬಿನಿ ನೀರು ಸರಬರಾಜು ಮಾಡುವ ಕಾಮಗಾರಿಯ ಸ್ಥಳ ಪರಿವೀಕ್ಷಣೆ ನಡೆಸಿದರು . ಸನ್ಮಾನ್ಯ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ರವರು ದಿನಾಂಕ 05.07.2021 ರಂದು ಆರ್.ಟಿ.ನಗರಕ್ಕೆ ಕಬಿನಿ ನೀರು ಪೂರೈಕೆ ಮಾಡುವ ಕಾಮಗಾರಿಯ ಸ್ಥಳ ಪರಿವೀಕ್ಷಣೆ ಮಾಡಿದ ಸಂದರ್ಭದಲ್ಲಿ ಇನ್ನೊಂದು ವಾರದಲ್ಲಿ ಆರ್.ಟಿ.ನಗರ ಬಡಾವಣೆಗೆ ಕಬಿನಿ ನೀರಿನ ಸಂಪರ್ಕ ಕಲ್ಪಿಸಲು ಸೂಚನೆ ನೀಡಿದರು . ಅದರನ್ವಯ ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ರೈಸಿಂಗ್ ಮೇನ್‌ನಲ್ಲಿ ಆರ್.ಟಿ.ನಗರ ಬಡಾವಣೆಗೆ ಕಬಿನಿ ನೀರಿನ ಲಿಂಕಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಂಡಿರುತ್ತಾರೆ . ಇಂದು ಕಾಮಗಾರಿ ಪರಿವೀಕ್ಷಣೆ ನಡೆಸಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರವರು ಇಂದು ಸಂಜೆಯೊಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ವರದಿಯನ್ನು ಪಡೆದರು . ಹಾಗೂ ದಿನಾಂಕ 16.07.2021 ರಂದು ಸನ್ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಬಸವರಾಜ್ ರವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ರವರು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲಾ ಸದಸ್ಯರುಗಳು ಆರ್.ಟಿ.ನಗರ ಬಡಾವಣೆಗೆ ಕಬಿನಿ ಕುಡಿಯುವ ನೀರು ಸಂಪರ್ಕವನ್ನು ಉದ್ಘಾಟಿಸುವರೆಂದು ಅಧ್ಯಕ್ಷರವರು ತಿಳಿಸಿದರು . ಈ ಸಮಯದಲ್ಲಿ ಸ್ಥಳದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್‌ರವರಾದ ಶ್ರೀ ಚಂದ್ರಪ್ಪ , ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ರವರಾದ ಶ್ರೀ ಆಸಿಫ್ ರವರು ಮತ್ತು ಪ್ರಾಧಿಕಾರದ ವಲಯ ಅಧಿಕಾರಿ -7 ರವರಾದ ಶ್ರೀ ನಾಗೇಶ್ ರವರು ಹಾಜರಿದ್ದರು


Share