ರಾಜ್ಯದ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಬಗ್ಗೆ ಸಂಜೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ ಒಂದು ವೇಳೆ ಲಾಕ್ಡೌನ್ ವಿಸ್ತರಣೆಯಾದರೆ ಕೆಲವೊಂದು ಕ್ಷೇತ್ರದಲ್ಲಿ ಸಡಿಲಿಕೆ ಮಾಡಲಾಗುವುದು ಹಾಗೂ ಮತ್ತೆ ಕೆಲವು ಕಡೆ ಕಠಿಣ ನಿಯಮ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಜ್ಞರು ವರದಿ ನೀಡಿರುವ ಪ್ರಕಾರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ
ಆದರೆ ರಫ್ತು ಸಂಬಂಧ ಲಾಕ್ ಓಪನ್ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ
ಗ್ರಾಮೀಣ ಭಾಗದಲ್ಲಿ ಕರೊನ ಸೋಂಕು ಹಬ್ಬುವುದು ಕಡಿಮೆಯಾಗಿಲ್ಲ. ಎಂದು ಅವರು ತಿಳಿಸಿದ್ದಾರೆ.
ಉಳಿದುಕೊಂಡಿರುವ ಪ್ಯಾಕೇಜನ್ನು ಎರಡು-ಮೂರು ದಿನಗಳಲ್ಲಿ ಪ್ರಕಟಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕರೋನಾ ಸೋಂಕು ಮತ್ತು ಮೃತಪಡುತ್ತಿರುವ ಸಂಖ್ಯೆ ಕಡಿಮೆಯಾಗಿರುವ ಸ್ಥಳಗಳಲ್ಲಿ ಲಾಕ್ ಡೌನ್ ಸಡಿಲ ಮಾಡಲು ತಜ್ಞ ವರದಿಯಲ್ಲಿ ತಿಳಿಸಲಾಗಿದೆ ,ಎಂದು ತಿಳಿದುಬಂದಿದೆ