ಕಲಾವಿದರಾದ ಪ್ರಭುಸ್ವಾಮಿ ಗೆ ,ರಾಷ್ಟ್ರಮಟ್ಟದ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ

50
Share

 

ಮೈಸೂರು ಜಿಲ್ಲೆಯ ಹೊಸಕೋಟೆ ಗ್ರಾಮದ ರಂಗಭೂಮಿ ಕಲಾವಿದರಾದ ಪ್ರಭುಸ್ವಾಮಿ ರವರಿಗೆ ರಾಷ್ಟ್ರಮಟ್ಟದ ಕರುನಾಡ ಸಿರಿ ಪ್ರಶಸ್ತಿ ನೀಡಿ ಗೌರವಿಸಿ
ದರ್ಶನ್ ಸೋಶಿಯಲ್ ಮತ್ತು ಕಲ್ಚರಲ್ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಸಾಂಸ್ಕೃತಿಕ ಕಲಾಗ್ರಾಮ ಮಲ್ಲತ್ತಳ್ಳಿಯಲ್ಲಿರುವ ಆಡಿಟೋರಿಯಂ ನಲ್ಲಿ ದರ್ಶನ್ ಸೋಶಿಯಲ್ ಮತ್ತು ಕಲ್ಚರಲ್ ಅಕಾಡೆಮಿ ರಿ ಸಂಘದವರಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕರುನಾಡ ಸಿರಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮದಲ್ಲಿ ಪ್ರಭುಸ್ವಾಮಿ ರವರು ರಂಗಭೂಮಿ ಹಾಗೂ ಕೃಷಿ ಕ್ಷೇತ್ರದಲ್ಲಿ ಅನೇಕ ಸಾಧನೆ ಹಾಗೂ ಪ್ರಶಸ್ತಿಗಳನ್ನು ಪಡೆದ ಇವರನ್ನು ಗುರುತಿಸಿ ಕರುನಾಡ ಸಿರಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು .

ಇದೆ ಸಂದರ್ಭದಲ್ಲಿ ಚಲನಚಿತ್ರ ನಟಿ ಕವಿತಾ ಚಂದನ್, ಡಾ. ಆಂಜನಪ್ಪ, ಸಂಘದ ಅಧ್ಯಕ್ಷರಾದ ದರ್ಶನ್ ರವರು ಮುಂತಾದವರು ಉಪಸ್ಥಿತರಿದ್ದರು.


Share