ಕವನ ಸಂಗ್ರಹ-ಡಾ.ಭೇರ್ಯ‌ರಾಮಕುಮಾರ್

286
Share

 

ದೈವ ಸ್ವರೂಪಿ

ಎಲ್ಲರ ಪ್ರಾಣ ಉಳಿಸುವ ಓ ವೈದ್ಯ,
ನೀ ದೇವರ ಪ್ರತಿರೂಪ,
ನಿನಗಿರುವ ತಾಳ್ಮೆ,ಸಹನಶೀಲ ಗುಣ,
ರೋಗಿಗಳ ಬಗೆಗಿನ ನಿಷ್ಕಲ್ಮಶ ಪ್ರೀತಿ,
ಇಡೀ ಜಗತ್ತಿಗೇ ಮಾದರಿ…

ನಿನ್ನದು ಸೇವಾ ಮನೋಬಾವ,
ನಿನ್ನುಸಿರು ಸಮಾಜದ ಆರೋಗ್ಯ,
ಜಾತಿ,ಮತ,ಧರ್ಮಗಳ‌ ಮೀರಿ ನಿಂತ,
ನೀ ಆಧುನಿಕ ಬ್ರಹ್ಮ..

ನಿನಗೂ ಕುಟುಂಬವಿದೆ,
ತಂದೆ-ತಾಯಿ,ಪತ್ನಿ ,ಮಕ್ಕಳು
ಎಲ್ಲ ರ ಮರೆತು ರೋಗಿಗಳ ರಕ್ಷಿಸಲು
ಅನವರತ ಹೋರಾಟ ನಡೆಸುತಿರುವ
ನೀ ತ್ಯಾಗಮಯಿ.

ನಿನ್ನ ವೈಯಕ್ತಿಕ ಕುಟುಂಬ,ಬದುಕು
ಎಲ್ಲವ ತ್ಯಾಗ ಮಾಡಿ
ಸಮಾಜದ‌ ಎಲ್ಲರ ಆರೋಗ್ಯ ಕಾಗಿ
ದಿನರಾತ್ರಿ ಶ್ರಮಪಡುವ
ನೀ ಮಹಾಭಾರತದ ಕರ್ಣನ ಪ್ರತಿರೂಪ !!!!

ನಿನ್ನಲೊಂದು ಮಾತೃ ಹೃದಯವಿದೆ,
ನೋವು-ನಲಿವುಗಳಿಗೆ ಮಿಡಿಯುವ
ನಿಸ್ವಾರ್ಥ ಚಿಂತನೆಯಿದೆ,
ರೋಗಿಗಳ ಸಾವು-ನೋವಿನಿಂದ ಉಳಿಸಿ,
ಸಂತಸಪಡುವ ಹೃದಯ ವೈಶಾಲ್ಯತೆಯಿದೆ.

ಓ ವೈದ್ಯ,ನೀ ಆಧುನಿಕ
ಬ್ರಹ್ಮ ಚೈತನ್ಯ,
ನಿನಗಿದೋ
ಕೋಟಿ ನಮನ

ಡಾ.ಭೇರ್ಯ‌ರಾಮಕುಮಾರ್,
ಸಾಹಿತಿಗಳು,ಪತ್ರಕರ್ತರು
ಮೊ:94496 80583
63631 72368


Share