*ಕೆ.ಆರ್ ಕ್ಷೇತ್ರದಲ್ಲಿ ನಡೆದ 2 ದಿನಗಳಲ್ಲಿ 9720 ಜನರಿಗೆ ಲಸಿಕೆ …..*

360
Share

ದಿನಾಂಕ 21 ಜೂನ್ ರಂದು 53ನೇ ವಾರ್ಡಿನ ಜೆ.ಎಸ್.ಎಸ್ ಪಬ್ಲಿಕ್ ಶಾಲೆ ವಿನಯಾ ಮಾರ್ಗ ರಸ್ತೆ. ಸಿದ್ದಾರ್ಥನಗರದಲ್ಲಿ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರ ನೇತೃತ್ವದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದ ಉದ್ಘಾಟನೆ ನಡೆದಿತ್ತು ಇಂದೂ ಕೂಡ ಮುಂದುವರಿದ ಭಾಗವಾಗಿ ವಾರ್ಡ್ ನಂ.53 ರ ವಿನಯಮಾರ್ಗದಲ್ಲಿರುವ ಜೆ.ಎಸ್.ಎಸ್ ಶಾಲೆಯಲ್ಲಿ ಲಸಿಕಾ ಅಭಿಯಾನ ನಡೆಯಿತು.

ಇಂದೂ ಕೂಡ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು ಲಸಿಕಾ ಅಭಿಯಾನ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ನೆರೆದಿದ್ದ ಯುವ ಸಮೂಹವನ್ನು ಮಾತನಾಡಿಸಿದರು ಅಲ್ಲದೇ ಲಸಿಕೆ ಹಾಕಿಸಿಕೊಂಡವರನ್ನು ಮಾತನಾಡಿಸಿ ನಿಮ್ಮ ಅಕ್ಕಪಕ್ಕದಲ್ಲಿ ಇನ್ನೂ ಲಸಿಕೆ ತೆಗೆದುಕೊಳ್ಳದಿದ್ದಲ್ಲಿ ಅಂಥವರನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಿ ಎಂದು ಕರೆ ಕೊಟ್ಟರು.
*ಕೆ.ಆರ್ ಕ್ಷೇತ್ರದಲ್ಲಿ ನಡೆದ ಎರಡು ದಿನಗಳು ನಡೆದ ಲಸಿಕಾ ಅಭಿಯಾನದಲ್ಲಿ ಸುಮಾರು 9720 ಜನರಿಗೆ ಲಸಿಕೆ ನೀಡಲಾಗಿದೆ*

ವಿಶೇಷವಾಗಿ ಲಸಿಕಾ ಅಭಿಯಾನ ಚೆನ್ನಾಗಿ ನಡೆಯಬೇಕಾದರೆ ಆರೋಗ್ಯ ಸಿಬ್ಬಂದಿ, ವೈದ್ಯರು , ಪೊಲೀಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರ ಪಾತ್ರ ಬಹುದೊಡ್ಡದಿರುತ್ತದೆ ಆ ಕಾರಣಕ್ಕಾಗಿ ಅವರಿಗೆಲ್ಲ ಸನ್ಮಾನ ಮಾಡುವ ಕೆಲಸವನ್ನು ಮಾನ್ಯ ಶಾಸಕರು ನೆರವೇರಿಸಿದರು.

ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶ್ರೀಮತಿ ರೂಪ, ಸ್ವಯಂಸೇವಾ ಸಂಸ್ಥೆಯ ಸ್ವಯಂಸೇವಕರು ಹಾಜರಿದ್ದರು. ವಿಶೇಷವಾಗಿ ಬಿಜೆಪಿ ಕೆ.ಆರ್ ಕ್ಷೇತ್ರದ ಪದಾಧಿಕಾರಿಗಳು ನೆರೆದಿದ್ದವರಿಗೆ ಕೋವಿಡ್ ಮಾರ್ಗಸೂಚಿ ಪಾಲಿಸುವಲ್ಲಿ ಸಹಾಯ ಮಾಡಿದರು.


Share