ಮೈಸೂರು ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಳೆದ ಬಾರಿಗಿಂತ ಶೇಕಡ 75ರಷ್ಟು ಮಾರುಕಟ್ಟೆ ಕುಸಿದಿದೆ ಎಂದು ಮೈಸೂರು ನಗರದ ಚಿತ್ರ ಶಿಲ್ಪಕಲಾ ಸಂಸ್ಥೆಯ ಗೌರಿ-ಗಣೇಶ ತಯಾರಿಸುವ ಬಿ ಶಿವಣ್ಣ ಅವರು ತಿಳಿಸಿದ್ದಾರೆ. ಕೊರೋನ ಸೋಂಕಿನ ಬಗ್ಗೆ ಅರಿವು ಮೂಡಿಸುವಂತಹ ಗಣೇಶನ ವಿಗ್ರಹ ನಿರ್ಮಿಸಿದ್ದು ಗಣೇಶನ ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗುವುದು ಎಂದು ಹೇಳಿದರು ಗಣೇಶನ ನಿರ್ಮಾಣಕ್ಕೆ ಸುಮಾರು 25 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗಿದೆ ಎಂದರು.