ಕೋವಿಡ್ ನಿಂದ ನಿಧನ ಹೊಂದಿದವರ ಮನೆಗೆ ಭೇಟಿ ನೀಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್.
ಕೆಪಿಸಿಸಿ ಆದೇಶದ ಮೇರೆಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆಪಿ ನಗರ ಭಾಗದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಮನೆಗೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಭೇಟಿ ನೀಡಿ ಆತ್ಮ ಸ್ಥೈರ್ಯ ತುಂಬಿ ಕುಟುಂಬದ ಜೊತೆ ಕಾಂಗ್ರೆಸ್ ಪಕ್ಷ ಇರುತ್ತದೆ ಎಂದು ತಿಳಿಸಿದರು.ಈ ವೇಳೆ ದೇವರಾಜ ಬ್ಲಾಕ್ ಉಪಾಧ್ಯಕ್ಷರಾದ ರಂಜನ್, ವಾರ್ಡ್ ಅಧ್ಯಕ್ಷ ಶೇಖರ್, ಯುವ ಮುಖಂಡರಾದ ಪುನೀತ್ ಮಾರುತಿ, ಮಹೇಂದ್ರ, ಸರ್ವೇಶ್, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.