ಗಿಡ ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿ :ಪ್ರಮೀಳಾ ಭರತ್

332
Share

ಗಿಡ ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿ :ಪ್ರಮೀಳಾ ಭರತ್

ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡೋಣ ಎಂದು ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಹೇಳಿದರು

ಇಂದು ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ಇಂದು ಜನ್ಮದಿನದ ಪ್ರಯುಕ್ತವಾಗಿ ವೃಕ್ಷಾರೋಹಣ ಭಾರತೀಯ ಜನತಾ ಪಾರ್ಟಿ ಚಾಮರಾಜ ಯುವಮೋರ್ಚಾ ಮೈಸೂರು ವತಿಯಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ನಾರಾಯಣಶಾಸ್ತ್ರಿ ರಸ್ತೆ ಹಾಗೂ ಡಿ ದೇವರಾಜ ಅರಸು ರಸ್ತೆ ಸಸಿಗಳನ್ನು ನೆಡುವ ಮೂಲಕ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಸ್ಮರಣಾ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಪರಿಸರ ನಾಶದಿಂದ ಪ್ರಕೃತಿ ವಿಕೋಪಗಳು ಜರುಗುತ್ತವೆ ಪ್ರಕೃತಿಯ ರಕ್ಷಣೆ ಮಾಡಬೇಕೆಂದರು.
1ಗಿಡವನ್ನು ನೆಟ್ಟು ಬೆಳೆಸಿದರೆ 1ಜೀವ ಉಳಿದಂತೆ 1ಮರ ಕಡಿದರೆ ಹಲವು ಜೀವ ನಾಶ ಮಾಡಿದಂತೆ ಹೀಗಾಗಿ ಪರಿಸರದ ಬಗೆ ಕಾಳಜಿ ಕೇವಲ ಪರಿಸರ ದಿನಾಚರಣೆ ದಿನದಂದು ಮಾತ್ರ ಇರದೆ ಪ್ರತಿದಿನವೂ ಪರಿಸರ ದಿನಾಚರಣೆ ಆಗಬೇಕು ಎಂದರು
ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ್ ರಾಜು, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ. ಸಚಿನ್. ಆರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್, ಶ್ರೀ ಸುಬ್ಬಯ್ಯ, ಶ್ರೀ ಚಿಕ್ಕವೆಂಕಟು, ಕರ್ನಾಟಕ ಮೃಗಾಲಯ ಸದಸ್ಯರಾದ ಶ್ರೀ ಗೋಕುಲ್ ಗೋವರ್ಧನ್, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್, ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಸಚಿನ್ ಜನಾರ್ಧನ್ & ಶ್ರೀ ಸಂದೀಪ್, ರಾಜ್ಯ ಬಿಜೆಪಿ ಎಸ್. ಟಿ. ಮೋರ್ಚಾ ಕಾರ್ಯದರ್ಶಿ ಶ್ರೀ ಪ್ರೇಮ್ ಕುಮಾರ್, ಕೆ.ಎಂ.ಪಿ.ಕೆ. ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಿಕ್ರಮ್ ಐಯಂಗಾರ್, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಅರ್ಜುನ್ ಕುಮಾರ್, ಕ್ಷೇತ್ರದ ಉಪಾದ್ಯಕ್ಷರಾದ ಶ್ರೀ ಯೋಗೇಶ್, ರಾಕೇಶ್, ಶಿವುಕುಮಾರ್ ಮತ್ತು ಸನತ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು….


Share