ಜೈ ಶ್ರೀ ರಾಮ ಯುವ ಬ್ರಿಗೇಡ್ ಉದ್ಘಾಟನೆ

93
Share

 

*ಮಾ 3 ಜೈ ಶ್ರೀ ರಾಮ ಯುವ ಬ್ರಿಗೇಡ್ ಉದ್ಘಾಟನೆ* ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಮೈಸೂರು: ಜೈ ಶ್ರೀ ರಾಮ ಯುವ ಬ್ರಿಗೇಡ್ ಉದ್ಘಾಟನೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಬೋಗಾದಿಯ ರವಿಶಂಕರ್ ಲೇಔಟ್ ನಲ್ಲಿ ಮಾರ್ಚ್ 3ರಂದು ಬೆಳಗ್ಗೆ 10:30ಕ್ಕೆ ಉದ್ಘಾಟಿಸಲಾಗುವುದು ಎಂದು ಜೈ ಶ್ರೀ ರಾಮ ಯುವ ಬ್ರಿಗೇಡ್ ಕಾರ್ಯದರ್ಶಿ ಮಹೇಶ್ ಕುಮಾರ್ ತಿಳಿಸಿದ್ದಾರೆ
ಸಂಘದ ಉದ್ಘಾಟನೆಯನ್ನು ಸಂಸದರಾದ ಪ್ರತಾಪ್ ಸಿಂಹ ನೆರವೇರಿಸಲಿದ್ದಾರೆ, ಅಧ್ಯಕ್ಷತೆ ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ, ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ ಎಸ್ ಶ್ರೀವತ್ಸ, ಜಿ ಟಿ ದೇವೇಗೌಡ, ಖ್ಯಾತ ವೈದ್ಯರಾದ ಡಾಕ್ಟರ್ ಎಸ್ ಪಿ ಯೋಗಣ್ಣ,
ಮೈಸೂರು ಮತ್ತು ಚಾಮರಾಜನಗರ ನ್ಯಾಯಾಂಗ ಇಲಾಖೆಯ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರದ ಶೇಷಾದ್ರಿ ಎಂ ವಿ,ಹಾಗೂ ಸಂಘದ ಅಧ್ಯಕ್ಷರು ರಾಘವೇಂದ್ರ ಡಿ ,
ಕಾರ್ಯದರ್ಶಿ ಆರ್ ಮಹೇಶ್ ಕುಮಾರ್, ಉಪಾಧ್ಯಕ್ಷ ವೀರೇಶ್ ರೆಡ್ಡಿ, ಸಹ ಕಾರ್ಯದರ್ಶಿ ಪ್ರದೀಪ್ ಕುಮಾರ್ , ಖಜಾಂಜಿ ಪ್ರವೀಣ್ ಕುಮಾರ್
ಮತ್ತು ಸಂಘದ ಪದಾಧಿಕಾರಿಗಳು ಹಾಜರಿರುತ್ತಾರೆ


Share