ಟೆಂಪೋ ಜಾಥಾ-ಸೀಮಾ ಜಿ.ಎಸ್ ಅವರ ಚುನಾವಣಾ ಪ್ರಚಾರ

34
Share

 

 

ಮೈಸೂರು – ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ 217- ಚಾಮರಾಜ ಕ್ಷೇತ್ರದ ಅಭ್ಯರ್ಥಿ ಕಾಮ್ರೇಡ್. ಸೀಮಾ ಜಿ.ಎಸ್ ಅವರ ಚುನಾವಣಾ ಪ್ರಚಾರವು ಟೆಂಪೋ ಜಾಥಾದ ಮೂಲಕ ನಡೆಯಲಿದ್ದು ಈ ಕಾರ್ಯಕ್ರಮದ ಚಾಲನೆಯನ್ನು ಪಕ್ಷದ ರಾಜ್ಯ ಸೆಕ್ರೆಟರಿ ಸದಸ್ಯರಾದ ಕಾಮ್ರೆಡ್ ಶಶಿಧರ್ ಎಂ ನೀಡಿದರು. ಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅವರ ದನಿಯನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಇಂದು ಜನ ವಿರೋಧಿ ನೀತಿಗಳನ್ನು ತಂದು ಜನರನ್ನು ಇನ್ನೂ ಕಷ್ಟಕ್ಕೆ ದೂಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷವೂ ಹೊರತಲ್ಲ. ಶಿಕ್ಷಣ ಆರೋಗ್ಯ ಕ್ಷೇತ್ರದ ಖಾಸಗೀಕರಣವಲ್ಲದೆ LIC, BSNL ನನ್ನು ಖಾಸಗೀಕರಣ ಮಾಡಿ, ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದರು. ರೈತರ ಹೋರಾಟವನ್ನು ನೆನೆದ ಅವರು , ಸ್ವತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ನಮ್ಮ ಈ ಕಾರ್ಯಕ್ರಮ ಶುರು ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿ ರಾಮಸ್ವಾಮಿ ಹುತಾತ್ಮರಾದ ಘಟನೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಅನ್ಯಾಯದ ವಿರುದ್ಧ ದನಿ ಎತ್ತಲು ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಚಾಮರಾಜ ಕ್ಷೇತ್ರದ ಅಭ್ಯರ್ಥಿ ಕಾಮ್ರೇಡ್. ಸೀಮಾ ಜಿ.ಎಸ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಚಾಮರಾಜ ಕ್ಷೇತ್ರದ ಅಭ್ಯರ್ಥಿ ಕಾಮ್ರೇಡ್. ಸೀಮಾ ಜಿ.ಎಸ್ ಮಾತನಾಡಿ ಹೆಣ್ಣು ಮಕ್ಕಳ ಮೇಲೆ ನಡೆಯುತಿರುವ ದೌರ್ಜನ್ಯ ಗಳು ಹೆಚ್ಚುತ್ತಿದೆ ಆದರೆ ಅದಕ್ಕೆ ತಕ್ಕ ಶಿಕ್ಷೆ ಆಗುತ್ತಿಲ್ಲ ಇದಕ್ಕೆ ಸಾಕ್ಷಿ ಎಂಬಂತೆ ಇಂದು ಜಂತರ್ ಮಂತರ್ ನಲ್ಲಿ ಗಳ ಹೋರಾಟದಲ್ಲಿ ನಿರತರಾಗಿರುವ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುತ್ತಿಲ್ಲ, ಅಪರಾಧಿಗಳಿಗೆ ಶಿಕ್ಷೆಯನ್ನು ನೀಡುತ್ತಿಲ್ಲ. ನಿರುದ್ಯೋಗ , ಭ್ರಷ್ಟಾಚಾರ, ಶಿಕ್ಷಣ ವ್ಯಾಪಾರಿಕರಣದ ವಿರುದ್ಧ ಹೋರಾಡಲು ಯಶು ಎಸ್ ಯು ಸಿ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು.


Share