ಮೈಸೂರು ಪತ್ರಿಕೆಯ ಇಂದಿನ MP—TALK ಕಾರ್ಯಕ್ರಮದಲ್ಲಿ ತಾಳ ಮಹತ್ವ ಕುರಿತು ಚರ್ಚಿಸಲಾಗುತ್ತದೆ. ಪ್ರಸಾದ್ ಸ್ಕೂಲ್ ಆಫ್ ರಿದಮ್ ನ ಸಂಸ್ಥಾಪಕರಾದ ಡಾ|| ಸಿಆರ್ ರಾಘವೇಂದ್ರ ಪ್ರಸಾದ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ,
ತಾಳ ಹೇಗೆ ಜನಿಸಿತು?
ಕರ್ನಾಟಕ ಸಂಗೀತಕ್ಕೂ ಪಾಶ್ಚಿಮಾತ್ಯ ಸಂಗೀತಕ್ಕೂ ಇರುವ ಸಂಬಂಧ, ಆಧುನಿಕ ಸಂಗೀತ ಪರಿಕರಗಳಾದ ಎಲೆಕ್ಟ್ರಾನಿಕ್ ಡ್ರಮ್ ರಿದಂ ಪ್ಯಾಡ್ ಇವುಗಳ ಸದ್ಬಳಕೆ ಮಹತ್ವ ಹೀಗೆ ಅನೇಕ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಲಯಬದ್ಧವಾಗಿ ನಡೆಸುವ ಯಾವುದೇ ಸಂಗೀತ ಕಾರ್ಯಕ್ರಮ ಮುಕ್ತಾಯ, ಹೊನ್ನಕೊಲಳು ಮುಕ್ತಾಯ ಇವುಗಳನ್ನು ಶ್ರೀ ಪ್ರಸಾದರವರ ಶಿಷ್ಯ ಕು. ಸುಮುಖ ತಿಳಿಸಿಕೊಡಲಿದ್ದಾರೆ. ಪಾರಂಪರಿಕ ಮೈಸೂರಿನ ಶ್ರೀಮನ್ ಮಹಾರಾಜರಾದ ಜಯಚಾಮರಾಜ ಒಡೆಯರು ಹಾಗೂ ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ಗೆ ಇರುವ ಸಂಬಂಧ .
ಇವುಗಳ ಬಗ್ಗೆ ಸುದೀರ್ಘ ವಿವರಣೆಗಳನ್ನು ಶ್ರೀ ಪ್ರಸಾದ್ ಹಂಚಿಕೊಂಡಿದ್ದಾರೆ