ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಪೂಜ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡರು. ಅದಾದ ನಂತರ ಮಾತನಾಡಿದ ಪ್ರಧಾನಿಯವರು ರಾಮನಿಗೆ ನಮೋ ನಮಃ ಎಂದು ಮಾತನ್ನಾರಂಭಿಸಿದರು. ಪ್ರಧಾನಿಯವರು ಮುಂದುವರೆದು ಮಾನಾಡಿದರು.
1 . ಸಾವಿರ ವರ್ಷ ನಂತರವೂ ಜನ ಈ ದಿನ ಸ್ಮರಿಸುತ್ತಾರೆ. 2 . ತ್ರೇತಾಯುಗದಲ್ಲಿ 14 ವರ್ಷ ರಾಮನ ವಿಯೋಗವಾಗಿತ್ತು. ಕಲಿಯುಗದಲ್ಲಿ ಶತಮಾನಗಳು ರಾಮನ ವಿಯೋಗದಿಂದ ನಾವೆಲ್ಲ ಕಷ್ಟಪಟ್ಟಿದ್ದೇವೆ. 3 . ಭಾರತದಾದ್ಯಂತ ದೀಪಾವಳಿಯಂತೆ ಇಂದು ಆಚರಿಸಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ, ದೇವಾಲಯಗಳಲ್ಲಿ ರಾಮನನ್ನು ಪೂಜಿಸಲಾಗಿದೆ. 4 . ರಾಮನೆಂದರೆ ವಿವಾದವಲ್ಲ, ಪರಿಹಾರ ಎನ್ನುವುದು ಜನಕ್ಕೆ ಅರ್ಥವಾಗುತ್ತದೆ. 5 . ರಾಮನೆಂದರೆ ಬೆಂಕಿಯಲ್ಲ, ಶಕ್ತಿ ಎನ್ನುವುದು ಅರ್ಥವಾಗುತ್ತದೆ. 6 . ಇಂದು ವಿಶ್ವವೇ ಸಂಭ್ರಮದಲ್ಲಿ ಕೂಡಿದೆ. 7 . ರಾಮ ಸರ್ವವ್ಯಾಪಿ ಎಂಬುದು ಇದರಿಂದ ತಿಳಿಯುತ್ತದೆ. 8 . ರಾಮನ ಪ್ರತಿಷ್ಠಾಪನೆ ವಸುದೈವ ಕುಟುಂಬಕಂ ಎನ್ನುವುದನ್ನು ಸಾರುತ್ತದೆ. 9 . ರಾಮಮಂದಿರ ರಾಷ್ಟ್ರ ಚೇತನದ ಮಂದಿರ. 10 . ರಾಮ ಭಾರತದ ಚೇತನ, ಭಾರತದ ಆತ್ಮ. 11 . ರಾಮ ಮಂದಿರ ಆಯ್ತು ಮುಂದೇನು ಎನ್ನುವುದು ಎಲ್ಲರ ಪ್ರಶ್ನೆ. 12 . ಕಾಲಚಕ್ರ ಬದಲಾಗುತ್ತಿದೆ. 13 . ಮುಂದಿನ ಸಾವಿರ ವರ್ಷಗಳಿಗೆ ಅಡಿಪಾಯ ಹಾಕಲು ಇದು ಸರಿಯಾದ ಸಮಯ.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...