ದರೋಡೆ ಹಾಗೂ ಹತ್ಯೆ ನಡೆದ ಸ್ಥಳಕ್ಕೆ ಶಾಸಕರ ಭೇಟಿ*

372
Share

*

ದರೋಡೆ ಹಾಗೂ ಹತ್ಯೆ ನಡೆದ ಸ್ಥಳಕ್ಕೆ ಶಾಸಕರ ಭೇಟಿ*

ಮೈಸೂರು ಕೃಷ್ಣರಾಜ ಕ್ಷೇತ್ರದ ವಾರ್ಡ್ ನಂ.61 ರ ವ್ಯಾಪ್ತಿಗೆ ಬರುವ ಚಾಮುಂಡಿ ವನದ ಸಮೀಪ ಇರುವ ಅಮೃತ್ ಗೋಲ್ಡ್ ಪ್ಯಾಲೇಸ್ ನಲ್ಲಿ ನಿನ್ನೆ ದುರ್ಘಟನೆ ನಡೆದಿದ್ದು ಇಂದು ಮಾನ್ಯ ಶಾಸಕರು ಪೋಲಿಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ ಅಲ್ಲದೇ ಮೃತರ ತಂದೆ ರಂಗ ಸ್ವಾಮಿ ಅವರಿಗೆ ಪರಿಹಾರದ ರೂಪದಲ್ಲಿ 5 ಲಕ್ಷ ರೂ ಗಳನ್ನು ನೀಡಲು ಮಾನ್ಯ ಮುಖ್ಯಮಂತ್ರಿಗಳು ಒಪ್ಪಿರುತ್ತಾರೆ. ತಕ್ಷಣವೇ ಅವರ ಕುಟುಂಬಕ್ಕೆ ಪರಿಹಾರವನ್ನು ತಲುಪಿಸಲಾಗುವುದು.

ಜನರಲ್ಲಿ ಭಯದ ವಾತಾವರಣ ಮೂಡಿರುವುದು ಸಹಜ ಈ ದೃಷ್ಟಿಯಲ್ಲಿ ಕೆ.ಆರ್ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಯ ಮುಖ್ಯಸ್ಥರನ್ನು ಕರೆದು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ರಹಿತವಾಗಿ ಮಾಡಲು ಕಳೆದ 6 ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದೇವೆ ಆದರೂ ಈ ಅಹಿತಕರ ಘಟನೆ ನಡೆದಿರುವುದು ದುಃಖಕರ ಜನರ ಹಿತದೃಷ್ಟಿಯಿಂದ ನಾಳೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಠಾಣಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಹಾಗೂ ವ್ಯಾಪಾರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೂ ಕರೆದು ಧೈರ್ಯ ತುಂಬಲಾಗುವುದು.

ಈ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಅಪರಾಧಿಗಳನ್ನ ಬಂಧಿಸುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದ್ದೇನೆ ಎಂದರು.


Share