ಪದಾಧಿಕಾರಿಗಳ ನೇಮಕಾತಿ ಆದೇಶದ ಪತ್ರ ವಿತರಣೆ

296
Share

.

ಮೈಸೂರು, ಇಂದು ಬೆಳಗ್ಗೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಬಿ.ಜೆ.ಪಿ. ದಲಿತ ಮೋರ್ಚಾ ಪದಾಧಿಕಾರಿಗಳ ನೇಮಕಾತಿ ಆದೇಶದ ಪತ್ರಗಳನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯಶಾಸಕರಾದ ಶ್ರೀ ಎಲ್. ನಾಗೇಂದ್ರರವರು ವಿತರಣೆ ಮಾಡಿದರು,
ಈ ಸಂಧರ್ಭದಲ್ಲಿ ಶಾಸಕರು ಮಾತನಾಡಿ ರಾಜ್ಯ ಸರ್ಕಾರ & ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಎಲ್ಲಾ ಪದಾಧಿಕಾರಿಗಳು ಶ್ರಮಿಸುವಂತೆ ತಿಳಿಸಿದರು. ಭಾರತೀಯ ಜನತಾ ಪಕ್ಷವು ದೇಶದ ಸರ್ವೋನ್ನತ ಹುದ್ದೆಯಾದ ಭಾರತ ದೇಶದ ರಾಷ್ಟ್ರಪತಿಯಾಗಿ ಶ್ರೀ ರಾಮನಾಥ ಕೋವಿಂದ್ ರವರನ್ನು ಆಯ್ಕೆ ಮಾಡಿರುವುದು ಪಕ್ಷವು ತಮ್ಮ ಮೇಲಿಟ್ಟಿರುವ ಕಾಳಜಿ ಹಾಗೂ ಗೌರವವನ್ನು ಸೂಚಿಸಿರುವುದನ್ನು ಸ್ಮರಿಸುವಂತೆ ತಿಳಿಸಿದರು.

*ಈ ಸಮಯದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ದಲಿತ ಮೋರ್ಚಾ ಅಧ್ಯಕ್ಷರಾದ ಶ್ರೀ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀ ಅನಿಲ್, ಶ್ರೀ ಹರೀಶ್, ಮುಖಂಡರುಗಳಾದ ಶ್ರೀ ಚಿಕ್ಕವೆಂಕಟು, ಶ್ರೀ ಪುನೀತ್, ಶ್ರೀ ದಿನೇಶ್, ಮುಂತಾದವರುಗಳು ಹಾಜರಿದ್ದರು.


Share