ಕೋವಿಡ್ ನಮ್ಮ ತಾಳ್ಮೆ ಮತ್ತು ನೋವು ಸಹಿಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದೆ ಎಂದು ಪ್ರಧಾನಿ ಮೋದಿಯವರು ಇಂದಿನ ತಮ್ಮ ಮನಸ್ಸಿನ ಮಾತು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಪ್ರಧಾನಿಮೋದಿಯವರ ಮನಸ್ಸಿನ ಮಾತಿನ ಮುಖ್ಯಾಂಶಗಳು : ಮೊದಲ ಕೋವಿಡ್ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ, ರಾಷ್ಟ್ರದ ಸ್ಥೈರ್ಯ ಹೆಚ್ಚಾಗಿತ್ತು. ಆದರೆ, ಈ ಚಂಡಮಾರುತ (2 ನೇ ಅಲೆ) ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.
ಕೋವಿಡ್ ವಿರುದ್ಧ ಗೆಲ್ಲಲು, ನಾವು ತಜ್ಞ ಮತ್ತು ವೈಜ್ಞಾನಿಕ ಸಲಹೆಗಳಿಗೆ ಆದ್ಯತೆ ನೀಡಬೇಕಾಗಿದೆ. ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರವು ತನ್ನ ಎಲ್ಲ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಲಸಿಕೆ ಬಗ್ಗೆ ಯಾವುದೇ ವದಂತಿಗಳಿಗೆ ಕಿವಿಗೊಡ ಬೀಡಿ ಎಂದು ನಾನು ಜನರನ್ನು ಕೋರುತ್ತೇನೆ. ಸರ್ಕಾರವು ಎಲ್ಲಾ ರಾಜ್ಯಗಳಿಗೆ ಉಚಿತ ಲಸಿಕೆ ಕಳುಹಿಸಿದೆ ಎಂದು ನೀವೆಲ್ಲರೂ ತಿಳಿದಿರಬೇಕು
45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರು ಇದರ ಲಾಭ ಪಡೆಯಬಹುದು. ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳು ಲಭ್ಯವಿರುತ್ತವೆ.
ಕಾರ್ಪೊರೇಟ್ ವಲಯವು ತಮ್ಮ ಉದ್ಯೋಗಿಗಳಿಗೆ ಲಸಿಕೆ ನೀಡುವ ಮೂಲಕ ಲಸಿಕೆ ಚಾಲನೆಯಲ್ಲಿ ಭಾಗವಹಿಸಬಹುದು. ಈ ಉಚಿತ ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರಯೋಜನಗಳನ್ನು ಸಾಧ್ಯವಾದಷ್ಟು ಜನರಿಗೆ ತಲುಪುವಂತೆ ನಾನು ರಾಜ್ಯಗಳನ್ನು ವಿನಂತಿಸುತ್ತೇನೆ.
ಸಾಂಕ್ರಾಮಿಕ ವಿರುದ್ಧದ ಈ ಹೋರಾಟದಲ್ಲಿ Possitivity ವಿಧಾನವು ಪ್ರಮುಖವಾಗಿದೆ.
: COVID ಸೋಲಿಸುವುದು ಇದೀಗ ನಮ್ಮ ಏಕೈಕ ಆದ್ಯತೆಯಾಗಿದೆ.
ಎಲ್ಲಾ ನಾಗರಿಕರಿಗೆ ಲಸಿಕೆ ಹಾಕಲು ಮತ್ತು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಾನು ಕೋರುತ್ತೇನೆ.