ಬೆಂಗಳೂರಿನ ಕೆಂಗೇರಿಯಲ್ಲಿ ಏರ್ಪಡಿಸಲಾಗಿದ್ದ ಫ್ರೀಸ್ಟೈಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಯುವಕ ಸುರೇಶ್ ಎಂಬುವರ ಮಗ ನಿಖಿಲ್ (26)ಪ್ರಾಣ ಪಕ್ಷಿ ಹಾರಿಹೋದ ದುರ್ಘ ಟನೆ ವರದಿಯಾಗಿದೆ.
ಕಳೆದ ಹತ್ತು ರಂದು ನವೀನ್ ರವಿ ಶಂಕರ್ ಎಂಬುವವರು ಆಯೋಜಿಸಿದ್ದ ಈ ಚಾಂಪಿಯನ್ ಶಿಪ್ ನಲ್ಲಿ ಬಾಕ್ಸಿಂಗ್ ರಿಂಗ್ ನಲ್ಲಿ ಎದುರಾಳಿಯ ಒಂದೇ ಒಂದು ಪಂಚಿಗೆ ನಿಕಿಲ್ ಕುಸಿದುಬಿದ್ದು ತೀವ್ರ ಅಸ್ವಸ್ಥರಾಗಿದ್ದರು .
ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿತ್ತಾದರೂ 2ದಿನಗಳ ನಂತರ ಇಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನಿಖಿಲ್ ರವರ ಶ್ವಾಶಕೋಶಕ್ಕೆ ತೀವ್ರ ಪೆಟ್ಟಾಗಿದ್ದು ಮೃತ್ಯುವಿಗೆ ಕಾರಣ ಎಂದು ಹೇಳಲಾಗಿದ್ದು ನಿಕಿಲ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು ಆಯೋಜಕ ನವೀನ್ ತಲೆತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...