ಬಾಯಿಗೆ ಅಲ್ಲ ಕಾಲಿಗೆ ಮಾಸ್ಕ್ ತೊಟ್ಟ ಸಚಿವ !!

240
Share

ಉತ್ತರಾಖಂಡ ಸಚಿವ ಯತಿಶ್ವರಾನಂದ್ ಅವರು ಸಭೆಯಲ್ಲಿದ್ದಾಗ ಕಾಲ್ಬೆರಳಿಗೆ ಮಾಸ್ಕ್ ನೇತುಹಾಕಿಕೊಂಡಿರುವುದು ಕ್ಯಾಮೆರಾ ಕಣ್ಣಿಗೆ ಕಂಡುಬಂದಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಚಿವರ ಚಿತ್ರಕ್ಕೆ ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯತಿಶ್ವರಾನಂದ್, ಉತ್ತರಾಖಂಡದ ಕೃಷಿ ಸಚಿವ ಸುಬೋಧ್ ಯುನಿಯಾಲ್ ಇತರ ರಾಜ್ಯ ಸಚಿವರೊಂದಿಗೆ ಸಂಭಾಷಿಸುತ್ತಿರುವುದು ಚಿತ್ರದಲ್ಲಿ ಕಂಡುಬಂದಿದೆ. ಚಿತ್ರದಲ್ಲಿ ಯಾರೂ ಮುಸ್ಕನ್ನು ಸರಿಯಾಗಿ ಧರಿಸದಿರುವುದನ್ನು ಕಾಣಬಹುದಾದರೂ, ಯತಿಶ್ವರಾನಂದ್ ಅವರ ಮಾಸ್ಕು ಕಾಲುಗಳಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು. ಯತಿಶ್ವರಾನಂದ್ ಹರಿದ್ವಾರ (ಗ್ರಾಮೀಣ) ಶಾಸಕ ಮತ್ತು ಉತ್ತರಾಖಂಡ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಕಬ್ಬು ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗಳ ಉಸ್ತುವಾರಿಯನ್ನು ಅವರು ಹೊಂದಿದ್ದಾರೆ.
ಸಂ. : ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಫಲರಾಗಿರುವ ಇಂತಹ ಸಚಿವರುಗಳು ನಮ್ಮನ್ನು ರಕ್ಷಿಸುತ್ತಾರೆ ಅಂದುಕೊಳ್ಳುವುದು ಮೂರ್ಖತನವೇ ಸರಿ.
ಮಾಸ್ಕ್ ಅನ್ನು ಏಕೆ ಧರಿಸಬೇಕು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುವ ಕನಿಷ್ಠ ಜ್ಞಾನವೂ ಇಲ್ಲ ಇವರು ಸಚಿವರು ಹೇಳಲೂ ನಾಚಿಕೆಯಾಗುತ್ತದೆ .


Share