ಬ್ರಹ್ಮಾಕುಮಾರಿಯರಿಂದ ವಿಶ್ವ ಪರಿಸರ ದಿನಾಚರಣೆ

48
Share

 


ಚಾಮರಾಜನಗರ -ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ‌ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಇಂದು ಪ್ರಕಾಶ ಭವನದ ಆವರಣದಲ್ಲಿ ಗಿಡ ನೆಟ್ಟು,ಗಿಡ ನೆಡುವ ನಾಗ,ಮತ್ತು ರಾಜು ಗಿಡ ರಕ್ಷಾಕವಚ‌ ತಯಾರಿಸುವ ವೆಂಕಟೇಶ ಸಾಲು ಮರದ ತಿಮ್ಮಪ್ಪ ವೆಂಕಟೇಶರವರನ್ನು ಸನ್ಮಾನಿಸಿ ಪಾರಿತೋಷಕ ಸಂಭಾವನೆ ನೀಡಿ‌ ಬ್ರಹ್ಮಾ‌ ಭೋಜನವನ್ನು ತಿನ್ನಿಸಿ ವಿಶ್ವ ಪರಿಸರ ದಿನಾಚರಣೆಯನ್ನು‌ ಸಂಭ್ರಮದಿಂದ ಆಚರಿಸಲಾಯಿತು.
ಗಿಡ ನೆಟ್ಟು,ನೀರೆರದು ಮಾತನಾಡಿದ ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ, ಪ್ರಕೃತಿಯ ಪತಿ ಪರಮಾತ್ಮ ದಾತಾ ಎಂದರೆ ಕೊಡುವವನಾಗಿದ್ದಾನೆ. ಅವನ ಮಕ್ಕಳು ಆತ್ಮಗಳು ಅವನಿಂದ ಪಡೆದು ಸೃಷ್ಟಿಯಲ್ಲಿ ಸತ್ಯಯುಗ ತ್ರೇತಾಯುಗದಲ್ಲಿ ಸುಖ ಕೊಡುವಂತಹ ಪಾತ್ರ ಮಾಡಿದವು. ದ್ವಾಪರ ಕಲಿಯುಗದಲ್ಲಿ ಲೋಭ ವೃತ್ತಿಯಿಂದ ಎಲ್ಲವೂ ನನಗೇ ಬೇಕು ಎಂಬ ಮನೋಭಾವದಿಂದ‌ ದುಃಖ ಕೂಪಕ್ಕೆ‌ತನ್ನನ್ನು ದೂಡಿಕೊಂಡಿದ್ದಾನೆ ಎಂದು ವಿಷಾದಿಸಿದರು.
ಪ್ರಕೃತಿಯಲ್ಲಿರುವ ಮರಗಿಡಗಳು‌ ಪರೋಪಕಾರ ಮಾಡುತ್ತೇವೆಯೇ ಹೊರತು ಅಪಕಾರ ಎಂದೂ ಮಾಡುವುದಿಲ್ಲ. ಆದ್ದರಿಂದ ಅವುಗಳನ್ನು ಬೆಳೆಸಿ ಪೋಷಿಸಿ ರಕ್ಷಿಸುತ್ತಿರುವ ಏಕೈಕ ಸಮಾಜ ಸೇವಕ, ಪರಿಸರ ಪ್ರೇಮಿ ಎಂದರೆ ವೆಂಕಟೇಶ್ ಎಂದು ಪ್ರಶಂಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿ ವೆಂಕಟೇಶ್ ನಗರದಲ್ಲಿ 10ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಇಂದು ಮರವಾಗಿ ಅನೇಕರಿಗೆ ನೆರಳು ಕೊಡುತ್ತಿರುವುದು ನನಗೆ ಆತ್ಮತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಸಂಗೀತ ಪ್ರೇಮಿ ರವಿಕುಮಾರ್ ‌ತಾವೇ ರಚಿಸಿರುವ ಮಾದಪ್ಪನ ಹಾಡುಗಳನ್ನು ಹಾಡಿ ರಂಜಿಸಿದರು.
ನಿವೃತ್ತ ಅರಣ್ಯಾಧಿಕಾರಿ ಎಂ.ಬಿ.ಕೃಷ್ಣಮೂರ್ತಿ ಮಾತನಾಡಿ ತಾವು ತಮ್ಮ ಹುಟ್ಟು ಹಬ್ಬದ ದಿನಗಳಲ್ಲಿ 75 ನೇ ಇಸಿವಿಯಿಂದ ಪ್ರತಿ ವರ್ಷ ಎರೆಡೆರಡು ವೃಕ್ಷಗಳನ್ನು‌ ನೆಟ್ಟು ಪೋಷಿಸುತ್ತಾ ಬಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಇಲ್ಲಿಂದ ಮೈಸೂರಿಗೆ ವರ್ಗಾವಣೆ ಹೊಂದಿದ ರಾಜಯೋಗ ವಿದ್ಯಾರ್ಥಿನಿ ಸರಸ್ವತಿಯಕ್ಕ ಮತ್ತು ಕುಟುಂಬಕ್ಕೆ ವರ್ಗದವರನ್ನು ಹೃದಯಸ್ಪರ್ಷಿಯಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ‌ ಓಂ ಶಾಂತಿ ನ್ಯೂಸ್ ಸರ್ವಿಸ್ ನ‌ ಬಿಕೆ‌ ಆರಾಧ್ಯ, ಸತೀಶ್, ಶ್ರೀನಿವಾಸ,ಸರಳಾ ,ಗೀತಾ,ಆಶಾ,ಪ್ರಮಿಳಾ,ಸುಲೋಚನ,ಸುಕನ್ಯಾ,ಸುವರ್ಣ,ಸುಧಾ,ಗೋವಿಂದರಾಜು,ಸುಂದರ್,ಶಿವಕುಮಾರ,ಲಕ್ಷ್ಮಿನರಸಿಂಹ ಪ್ರಸಾದ್, ನಾರಾಯಣಶೆಟ್ಟಿ,ಮಹೇಶ್ ಮುಂತಾದವರು ಹಾಜರಿದ್ದರು.


Share