ಮೈಸೂರಿನಲ್ಲಿ ಕೇರಳ ರಸ್ತೆ ಸಾರಿಗೆ ಬಸ್ ಅಪಘಾತ

26
Share

ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಸುವಿಹಾರಿ ಬಸ್ ಮೈಸೂರು- ಊಟಿ ರಸ್ತೆಯ ಜೆ ಎಸ್ ಎಸ್ ಕಾಲೇಜಿನ ಬಳಿ ರಸ್ತೆಯ ವಿಭಜದ ಮೇಲೆ ಹತ್ತಿರುವ ಪ್ರಕರಣ ವರದಿಯಾಗಿದೆ. ಮಳೆ ಬರುತ್ತಿದ್ದಾಗಿಯೂ ವೇಗವಾಗಿ ಚಲಿಸುತ್ತಿದ್ದ ಬಸ್ಸು ಆಯಾ ತಪ್ಪಿ ಇದರ ಮೇಲೆ ಹತ್ತಿದೆ ಎಂದು ವರದಿಯಾಗಿದೆ. ಮಧ್ಯರಾತ್ರಿ ಸುಮಾರು 1:30ರ ವೇಳೆಯಲ್ಲಿ ಈ ಅವಘಡ ನಡೆದಿದ್ದು ಡ್ರೈವರ್ ಸೇರಿದಂತೆ ಒಳಗೆ ನಿದ್ರಿಸುತ್ತಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೇಳಲಾಗಿದ್ದು ಬಸ್ಸಿನ ಮುಂಭಾಗದ ಚಕ್ರ ಹಾಗೂ ಆಕ್ಸಿಲ ಸಂಪೂರ್ಣ ಹಾಳಾಗಿದೆ, ಮೈಸೂರು ನಗರ ಸಂಚಾರಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಸದರಿ ರಸ್ತೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸದರಿ ಸ್ಥಳದಲ್ಲಿ ಸೂಕ್ತವಾದ ರಿಫ್ಲೆಕ್ಟರು ಅಥವಾ ಸೂಚನಾ ಫಲಕಗಳು ಇರದ ಕಾರಣ ಇದೇ ಸ್ಥಳದಲ್ಲಿ ಅಪಘಾತಗಳು ನಡೆಯುತ್ತಲೇ ಇದೆ.


Share