ಮೈಸೂರು,
ಮೈಸೂರು ನಗರದಲ್ಲಿ ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪ್ರಮುಖ ಮಾರುಕಟ್ಟೆಗಳನ್ನು ಬಂದ್ ಮಾಡಿ ರಾಸಾಯನಿಕ ಸಿಂಪಡಿಕೆ ( Santise)ಮಾಡಲು ನಗರಪಾಲಿಕೆ ನಿರ್ಧರಿಸಿದ್ದು ಇಂದು ಸಂಜೆ ಅಂತಿಮ ತೀರ್ಮಾನ ಹೊರಬರಲಿದೆ.
ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ ವಾಣಿವಿಲಾಸ ಮಾರುಕಟ್ಟೆ ಇತ್ಯಾದಿ ಗ್ರಾಹಕರು ಹೆಚ್ಚು ಬರುವ ಮಾರುಕಟ್ಟೆಗಳನ್ನು ಬಂದ್ ಮಾಡಿ sanitize ಮಾಡಲು ನಿರ್ಧರಿಸಲಾಗಿದೆ ಎಂದು ಮೈಸೂರು ನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಸ್ಪಷ್ಟಪಡಿಸಿದ್ದಾರೆ.