ಮೈಸೂರು: ಕೇರಂ ಟೂರ್ನಮೆಂಟ್ ವಿಜೇತರಿಗೆ ಬಹುಮಾನ ವಿತರಣೆ

219
Share

ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ಇರುವ ಶ್ರೀ ಶಬರೀಶ ಕೇರಂ ಅಸೋಸಿಯೇಷನ್ ವತಿಯಿಂದ ಹಿರಿಯ ಕೇರಂ ಕ್ರೀಡಾ ಪಟು ದಿ|| ರಾಮಲಿಂಗಣ್ಣನವರ ಸ್ಮರಣಾರ್ಥ ಕ್ಲಬ್ ಮಟ್ಟದ ಕೇರಂ ಡಬಲ್ಸ್ ಟೂರ್ನಮೆಂಟನ್ನು ಏರ್ಪಡಿಸಲಾಗಿತ್ತು. ಈ ಟೂರ್ನಿಯಲ್ಲಿ ಒಟ್ಟು 22 ಟೀಂ ಗಳು ಭಾಗವಹಿಸಿದ್ದರು. ಮಂಗಳಮುಖಿಯಾದ ಐಶ್ವರ್ಯರವರು ಭಾಗವಹಿಸಿದ್ದುದು ವಿಶೇಷವಾಗಿತ್ತು. ಪ್ರತಿ ಸುತ್ತಿನಲ್ಲೂ ಬೆಸ್ಟ್ ಆಫ್ ಥ್ರೀ ಗೇಮ್ ಪ್ರಕಾರ ಆಡಿ ಒಟ್ಟು ನಾಲ್ಕು ಸುತ್ತುಗಳನ್ನು ಗೆದ್ದುಕೊಂಡು ಸುಬ್ರಹ್ಮಣ್ಯ ಮತ್ತು ಗಿರೀಶ್ ಹಾಗೂ ಪ್ರಕಾಶ್ ಮತ್ತು ರಾಜಣ್ಣ ಫೈನಲ್ ತಲುಪಿದರು. ಫೈನಲ್ ನ ಮೊದಲನೇ ಪಂದ್ಯದಲ್ಲಿ ಗಿರೀಶ್ ಮತ್ತು ಸುಬ್ರಮಣ್ಯ ರವರು 29-6 ಅಂಕಗಳಿಸಿ ಮುನ್ನಡೆ ಸಾಧಿಸಿ ಎರಡನೇ ಪಂದ್ಯದಲ್ಲಿ 29-0 ಅಂಕ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಪ್ರಕಾಶ್ ಮತ್ತು ರಾಜಣ್ಣನವರು ದ್ವಿತೀಯ ಸ್ಥಾನ ಪಡೆದರು. ಶ್ರೀ ಶಬರೀಶ ಕೇರಂ ಅಸೋಸಿಯೇಷನ್ನಿನ ಹಿರಿಯ ಕ್ರೀಡಾಪಟುಗಳಾದ ಮೊಹಮ್ಮದ್ (ದಾದಾ), ಪ್ರಸಾದ್, ನಟರಾಜ್, ಈಶ್ವರ್, ಹರೀಶ್, ಆನಂದ್ ಹಾಗೂ ಅಸೋಸಿಯೇಷನ್ ಕಾರ್ಯದರ್ಶಿಯವರಾದ ಸುರೇಂದ್ರರವರಿಂದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿಯವರಾದ ಸುರೇಂದ್ರರವರು ಮಾತನಾಡಿ ಟೂರ್ನಮೆಂಟ್ ಯಶಸ್ವಿಯಾಗಿ ನೆಡೆಸಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಹಾಗೂ ಸ್ಪರ್ಧಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.


Share