ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಗೆಲ್ಲಿಸಲು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಮನವಿ

66
Share

 

ಶಾಸಕ ಎಲ್. ನಾಗೇಂದ್ರ ರವರನ್ನ 30ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಲು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮನವಿ,

ಚಾಮರಾಜ ಕ್ಷೇತ್ರದ ಬೃಂದಾವನ ಬಡಾವಣೆಯಲ್ಲಿ‌ ಬ್ರಾಹ್ಮಣ ಸಂಘ ಸಂಸ್ಥೆಗಳ ಸಭೆಯನ್ನ ಆಯೋಜಿಸಲಾಗಿತ್ತು, ಒಂಟಿಕೊಪ್ಪಲು ವಿಪ್ರರ ವೃಂದ, ಬೃಂದಾವನ ಬ್ರಾಹ್ಮಣ ಬಳಗ, ಹೆಬ್ಬಾಳ್ ವಿಜಯನಗರ ಬ್ರಾಹ್ಮಣ ಸಂಘ, ಮಾಧ್ವ ಸಮೂಹ, ಐಯ್ಯಂಗಾರ್ ವೇದಿಕೆ, ಮುಲಕನಾಡು ಸಂಘ, ಶಂಕರಬಳಗ, ಸೇರಿದಂತೆ ವಿವಿಧ ಬಡಾವಣೆಯ ನೂರಾರು ವಿಪ್ರರು ಮುಖಂಡರು ಸೇರಿದ್ದರು, ಶಾಸಕರಾದ ಎಲ್. ನಾಗೇಂದ್ರ ರವರಿಗೆ ವಿಪ್ರ ಅರ್ಚಕರು ಮತ್ತೊಮ್ಮೆ ಅತ್ಯಾಧಿಕ ಮತಗಳಿಂದ ಗೆದ್ದು ಬರುವಂತೆ ಆಶೀರ್ವದಿಸಿದರು,

ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ರವರು ಮಾತನಾಡಿ ಚಾಮರಾಜ ಕ್ಷೇತ್ರದಲ್ಲಿ 25000ಕ್ಕೂ ಹೆಚ್ಚು ವಿಪ್ರರಿದ್ದಾರೆ, ಬ್ರಾಹ್ಮಣರು ಬಿಜೆಪಿಯ ಅಭ್ಯರ್ಥಿ ಎಲ್. ನಾಗೇಂದ್ರ ರವರನ್ನ ಗೆಲ್ಲಿಸುವಂತೆ ಮುಂದಾಗಬೇಕು ಎಂದು ಮನವಿ ಮಾಡಿದರು,

ಶಾಸಕರಾದ ಎಲ್. ನಾಗೇಂದ್ರ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ಗ್ರಾಮಾಂತರಧ್ಯಕ್ಷರಾದ ಗೋಪಾಲ್ ರಾವ್, ಪುರೋಹಿತರಾದ ಕೃಷ್ಣಮೂರ್ತಿ, ನರಸಿಂಹ ಮೂರ್ತಿ, ಹೆಬ್ಬಾಳ್ ಬ್ರಾಹ್ಮಣ ಸಂಘದ ಗುರುಪ್ರಸಾದ್, ಅನ್ನಪೂರ್ಣೆಶ್ವರಿ ದೇವಸ್ಥಾನದ ಪ್ರದೀಪ್ ದೀಕ್ಷಿತ್, ಪುಟ್ಟಸ್ವಾಮಿ, ಶ್ರೀನಾಥ್, ಶ್ರೀನಿವಾಸ್, ವಿಘ್ನೇಶ್ವರ ಭಟ್, ಸುದರ್ಶನ್, ಲಕ್ಷ್ಮಿ, ರಾಜೇಶ್ವರಿ, ಸೌಮ್ಯ, ಸೀತಾಲಕ್ಷ್ಮಿ ಇನ್ನಿತರರು ಇದ್ದರು


Share