ಮೈಸೂರು: ನಿವೃತ್ತ ಎಂಜಿನಿಯರ್ ಸಿ.ಎಸ್.ಕೃಷ್ಣನ್ ನಿಧನ

25
Share

 

ಸಿ.ಎಸ್.ಕೃಷ್ಣನ್

ಮೈಸೂರು: ನಗರದ ನಿವೃತ್ತ ಎಂಜಿನಿಯರ್ ಸಿ.ಎಸ್.ಕೃಷ್ಣನ್ (90) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು.
ಅವರಿಗೆ ಪುತ್ರ ಹಾಗೂ ಕ್ರೀಡಾ ವರದಿಗಾರ ಸಿ‌.ಕೆ.ಮುರಳಿಧರನ್, ಪುತ್ರಿ, ಸೊಸೆ, ಇಬ್ಬರು ಮೊಮ್ಮಕ್ಕಳು ಇದ್ದಾರೆ.
ಕೊಯಮತ್ತೂರಿನಲ್ಲಿ ಲಕ್ಷ್ಮಿ ಮಿಷನ್ ವಕ್ಸ್೯ ನಲ್ಲಿ ಎಂಜಿನಿಯರ್ ಆಗಿದ್ದ ಅವರು ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ತಜ್ಞರ ಅನುಭವವಗಳನ್ನು ಪಡೆದಿದ್ದರು. ಇದರಿಂದ ಅವರಿಗೆ ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನಿಸ್, ಸ್ಪ್ಯಾನಿಷ್ ಒಟ್ಟುಂ 16 ಭಾಷೆಗಳನ್ನು ಬಲ್ಲವರಾಗಿದ್ದರು.
1974ರಲ್ಲಿ ವಿಶ್ವ ಟೇಬಲ್ ಟೆನಿಸ್ ಟೂರ್ನಿ ಕೊಲ್ಕತ್ತಾದಲ್ಲಿ ನಡೆದಾಗ ಜಪಾನ್ ತಂಡಕ್ಕೆ ದ್ವಿಭಾಷಿಯಾಗಿ ಕಾರ್ಯ ನಿರ್ವಹಿಸಿದ್ದರು.
ಅವರ ಅಂತ್ಯಕ್ರಿಯೆ ಗುರುವಾರ ಗೋಕುಲಂನ ಚಿರಶಾಂತಿಧಾಮದಲ್ಲಿ ನಡೆಯಿತು.

 


Share