*ನೂತನ ಬಸ್ ತಂಗುದಾಣಗಳ ಲೋಕಾರ್ಪಣೆ..*
ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನ ಬಸ್ ತಂಗುದಾಣಗಳ ಲೋಕಾರ್ಪಣೆಯನ್ನು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸರವರು ಉದ್ಘಾಟಿಸಿದರು..
ಕೃಷ್ಣರಾಜ ಕ್ಷೇತ್ರದಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂಗಳ 10 ಬಸ್ ತಂಗುದಾಣ ಗಳನ್ನು ನಿರ್ಮಾಣ ಮಾಡಿಸಿ ಅದನ್ನು ಜನತೆಗೆ ಅನುಕೂಲ ಮಾಡಿಕೊಟ್ಟರು..
ಮೊದಲ ಹಂತದಲ್ಲಿ ಜೆ.ಎಲ್.ಬಿ.ರಸ್ತೆ, ಸಿದ್ದಪ್ಪ ವೃತ್ತ,ಹಾರ್ಡಿಂಗ್ ವೃತ್ತ,ಶಾಂತಿ ಸಾಗರ್ ಮುಂತಾದ ಕಡೆ ಸಾಂಪ್ರದಾಯಿಕ ಉದ್ಘಾಟಿಸಲಾಯಿತು
ನಂತರ ಮಾತನಾಡಿದ ಶ್ರೀವತ್ಸರವರ ತಂಗುದಾಣ ಗಳು ಸಾರ್ವಜನಿಕರು,ಪ್ರಯಾಣಿಕರು ಅನುಕೂಲ ಪಡೆದುಕೊಳ್ಳಬೇಕು, ಬಸ್ಸು ತಂಗುದಾಣ ದ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಡಬೇಕು, ಇದಕ್ಕೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಇರಬೇಕು ಮತ್ತು ಭಿತ್ತಿ ಪತ್ರ ಅಂಟಿಸಿ ಸಾರ್ವಜನಿಕ ರಿಗೆ ಕಿರಿ ಕಿರಿ ಉಂಟುಮಾಡುವ ಬಿತ್ತಿ ಪತ್ರ ಅಂಟಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಬಸ್ ತಗುದಾಣದಲ್ಲಿ ಸಾರಿಗೆ ಇಲಾಖಾ ವತಿಯಿಂದ ದಿನನಿತ್ಯ ಓಡಾಡುವ ಬಸ್ಸುಗಳ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳಬೇಕು,ಹಾಗೂ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಇದರ ನಿರ್ವಹಣೆ ಸರಿಯಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು…
ಈ ಸಂಧರ್ಭದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ ಮಾಜಿ ಮೇಯರ್ ಶಿವಕುಮಾರ್, ಮಾಜಿನಗರ ಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ರಮೇಶ್, ಹಾಗೂ ಜೋಗಿ ಮಂಜು, ಉಮೇಶ್,ರಾಕೇಶ್ ಗೌಡ, ಜೋಗಪ್ಪ, ಕೃಷ್ಣನಾಯಕ, ಶರತ್ ಭಂಡಾರಿ, ಕಿಶೋರ್, ವಿಜಯ್ ನಾಯಕ್, ನಂದೀಶ್ ನಾಯಕ್, ಅರುಣ್, ಪ್ರದೀಪ್, ಜಯರಾಮ್, ಅನ್ನಪೂರ್ಣಮ್ಮ, ಕೀರ್ತಿ, ಲಿಕೀತ್ ಗೌಡ,ಮಂಜುನಾಥ್,ಅಧಿಕಾರಿಗಳು ಇದ್ದರು….