ಮೈಸೂರು- ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

170
Share

ಮೈಸೂರು, -ಕೊಡಗು ಸಂಸದ ಶ್ರೀ ಪ್ರತಾಪ್ ಸಿಂಹ ಹಾಗೂ ಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಹಾಗೂ ಸ್ಥಳೀಯ ಮೈಸೂರು ಮಹಾನಗರ ಪಾಲಿಕೆ ಸದಸ್ಯರುಗಳ ಸಮ್ಮುಖದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು* ನೆರವೇರಿಸಲಿದ್ದು, ಈ ಕಾರ್ಯಕ್ರಮದಲ್ಲಿ ತಾವು ಹಾಜರಾಗುವಂತೆ ತಮ್ಮಲ್ಲಿ ಕೋರಲು ಮಾನ್ಯ ಸಂಸದರಿಂದ ನಿರ್ದೇಶಿತನಾಗಿದ್ದೇನೆ.

*ಉಧ್ಘಾಟನೆ ಕಾರ್ಯಕ್ರಮ ನೆರವೇರಿಸಿಲಿರುವ ವಿವರ
1. *ಬೆಳಿಗ್ಗೆ-09.00ಕ್ಕೆ ಮೈಸೂರು ನಗರದ ವಾರ್ಡ್ ನಂ-02ರ ಮಂಚೇಗೌಡನಕೊಪ್ಪಲು, ಕಟ್ಟೆ ಹೊಸೂರು ಹತ್ತಿರ ರೂ.10.00ಲಕ್ಷಗಳ ಅನುದಾನದಲ್ಲಿ ನಿರ್ಮಾಣ ಮಾಡಲಾದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ*

2. *ಬೆಳಿಗ್ಗೆ-09.20ಕ್ಕೆ ಮೈಸೂರು ನಗರದ ವಿಜಯನಗರ 2ನೇ ಹಂತ ಕಾಲಭೈರವೇಶ್ವರ ದೇವಸ್ಥಾನದ ಹತ್ತಿರದ ಪಾರ್ಕ್ ನಲ್ಲಿ ರೂ.6.50ಲಕ್ಷಗಳ ಅನುದಾನದಡಿ ಶುದ್ಧ ಕುಡಿಯುವ ನೀರಿನ ಘಟಕದ ಗುದ್ದಲಿ ಪೂಜೆ ಕಾಮಗಾರಿ*

3. *ಬೆಳಿಗ್ಗೆ-09.40ಕ್ಕೆ ಮೈಸೂರು ನಗರದ ವಾರ್ಡ್ ನಂ-23 ರ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ರೂ.6.50ಲಕ್ಷಗಳ ಅನುದಾನದಡಿ ಶುದ್ಧ ಕುಡಿಯುವ ನೀರಿನ ಘಟಕ ಗುದ್ದಲಿ ಪೂಜೆ ಕಾಮಗಾರಿ*

4. *ಬೆಳಿಗ್ಗೆ-10.00ಕ್ಕೆ ಮೈಸೂರು ನಗರದ ವಾರ್ಡ್ ನಂ-25 ರ ಸಯ್ಯಾಜಿರಾವ್ ರಸ್ತೆಯಲ್ಲಿ ರೂ.6.50ಲಕ್ಷಗಳ ಅನುದಾನದಡಿ ಶುದ್ಧ ಕುಡಿಯುವ ನೀರಿಯ ಘಟಕ ಗುದ್ದಲಿ ಪೂಜೆ ಕಾಮಗಾರಿ*

5. ಬೆಳಿಗ್ಗೆ-10.20 ಕ್ಕೆ ಮೈಸೂರು ನಗರದ ವಾರ್ಡ್ ನಂ-25 ರ ಈ.ಡಿ ಆಸ್ಪತ್ರೆಯ ಹಿಂಭಾಗದ ಪುತ್ಥಳಿ ಪಾರ್ಕ್ ನ ಲಯನ್ಸ್ ಭವನ ರಸ್ತೆ (ಪೌ0ಟೈನ್ ರಸ್ತೆ) 1ನೇ ಕ್ರಾಸ್ ನಲ್ಲಿ ರೂ.50.00ಲಕ್ಷಗಳ ಅನುದಾನದಡಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು


Share