ಮೈಸೂರು-ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

182
Share

ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ
ಮೈಸೂರು. :- ಕರ್ನಾಟಕ ಲೋಕಾಯುಕ್ತ ಮೈಸೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮೈಸೂರು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ, ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಅಧಿಕೃತ ಕೆಲಸಗಳ ಅನಗತ್ಯ ವಿಳಂಬ, ಲಂಚದ ಹಣದ ಬೇಡಿಕೆ ಇತ್ಯಾದಿ ತೊಂದರೆಗಳನ್ನು ನೀಡುತ್ತಿರುವ ಬಗ್ಗೆ ಸಂಬAಧಪಟ್ಟ ಸಾರ್ವಜನಿಕ ಹಾಗೂ ಸರ್ಕಾರಿ ಅಧಿಕಾರಿ ನೌಕರರ ವಿರುದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಅಡಿಯಲ್ಲಿ ಕ್ರಮಬದ್ದವಾಗಿ ಭರ್ತಿಮಾಡಿದ ದೂರುಗಳನ್ನು ನಮೂನೆ 1 ರಲ್ಲಿ ಮತ್ತು 2 ರಲ್ಲಿ ಪ್ರಮಾಣ ಪತ್ರಗಳನ್ನು ಅಗತ್ಯ ದಾಖಲಾತಿಗಳೊಡನೆ ಸ್ವೀಕರಿಸುವ ಕಾರ್ಯಕ್ರಮವನ್ನು 2022ರ ಜೂನ್ 9 ರಿಂದ ಜೂನ್ 29 ರವರೆಗೆ ಬೆಳಿಗ್ಗೆ 11 ಗಂಟೆಯಿAದ 1 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಮೈಸೂರು ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕುವಾರು ಭೇಟಿ:
2022ರ ಜೂನ್ 9 ರಂದು ಸಾಲಿಗ್ರಾಮ ತಾಲ್ಲೂಕಿನ ಸಾಲಿಗ್ರಾಮ ಪ್ರವಾಸಿ ಮಂದಿರ , ಜೂನ್ 10 ರಂದು ಮೈಸೂರು ನಗರದ ಜೆ.ಎಲ್.ಬಿ ರಸ್ತೆ ಚಾಮುಂಡಿ ಅತಿಥಿ ಗೃಹ, ಜೂನ್ 16 ರಂದು ಹೆಚ್.ಡಿ.ಕೋಟೆ ತಾಲ್ಲೂಕು ಪಿ.ಡ.ಬ್ಲೂö್ಯಡಿ ಅತಿಥಿ ಗೃಹ ಹೆಚ್.ಡಿ.ಕೋಟೆ, ಜೂನ್ 17 ರಂದು ಮೈಸೂರು ತಾಲ್ಲೂಕು ಕಚೇರಿ ಆವರಣ ಮೈಸೂರು, ಜೂನ್ 18 ರಂದು ಪಿರಿಯಾಪಟ್ಟಣ ತಾಲ್ಲೂಕು ಪಿ.ಡ.ಬ್ಲೂö್ಯಡಿ ಅತಿಥಿ ಗೃಹ ಪಿರಿಯಾಪಟ್ಟಣ, ಜೂನ್ 23 ರಂದು ನಂಜನಗೂಡು ತಾಲ್ಲೂಕಿನ ತಾಲ್ಲೂಕು ಕಚೇರಿ ಆವರಣ ನಂಜನಗೂಡು, ಜೂನ್ 24 ರಂದು ಸರಗೂರು ತಾಲ್ಲೂಕಿನ ತಾಲ್ಲೂಕು ಕಚೇರಿ ಆವರಣ ಸರಗೂರು, ಜೂನ್ 27 ರಂದು ಕೆ.ಆರ್.ನಗರ ತಾಲ್ಲೂಕಿನ ಪಿ.ಡ.ಬ್ಲೂö್ಯಡಿ ಅತಿಥಿ ಗೃಹ ಕೆ.ಆರ್.ನಗರ, ಜೂನ್ 28 ರಂದು ಹುಣಸೂರು ತಾಲ್ಲೂಕಿನ ಪಿ.ಡ.ಬ್ಲೂö್ಯಡಿ ಅತಿಥಿ ಗೃಹ ಹುಣಸೂರು, ಜೂನ್ 29 ರಂದು ಟಿ.ನರಸೀಪುರ ತಾಲ್ಲೂಕಿನ ತಾಲ್ಲೂಕು ಕಚೇರಿ ಆವರಣ ಟಿ.ನರಸೀಪುರ.
ಚಾಮರಾಜನಗರ ಜಿಲ್ಲೆಯಲ್ಲಿ ಜೂನ್ 9 ರಂದು ಯಳಂದೂರು ತಾಲ್ಲೂಕಿನ ಪ್ರವಾಸಿ ಮಂದಿರ ಯಳಂದೂರು, ಜೂನ್ 10 ರಂದು ಗುಂಡ್ಲುಪೇಟೆ ತಾಲ್ಲೂಕಿನ ಪ್ರವಾಸಿ ಮಂದಿರ ಗುಂಡ್ಲುಪೇಟೆ, ಜೂನ್ 16 ರಂದು ಚಾಮರಾಜನಗರ ತಾಲ್ಲೂಕಿನ ಪ್ರವಾಸಿ ಮಂದಿರ ಚಾಮರಾಜನಗರ, ಜೂನ್ 17 ರಂದು ಕೊಳ್ಳೇಗಾಲ ತಾಲ್ಲೂಕಿನ ಪ್ರವಾಸಿ ಮಂದಿರ ಕೊಳ್ಳೇಗಾಲ, ಜೂನ್ 24 ರಂದು ಹನೂರು ತಾಲ್ಲೂಕಿನ ಪ್ರವಾಸಿ ಮಂದಿರ ಹನೂರು.
ಮಡಿಕೇರಿ ಜಿಲ್ಲೆಯಲ್ಲಿ ಜೂನ್ 9 ರಂದು ಸೋಮವಾರಪೇಟೆ ತಾಲ್ಲೂಕಿನ ತಾಲ್ಲೂಕು ಕಚೇರಿ ಆವರಣ ಸೋಮವಾರಪೇಟೆ, ಜೂನ್ 10 ರಂದು ವೀರಾಜಪೇಟೆ ತಾಲ್ಲೂಕಿನ ತಾಲ್ಲೂಕು ಕಚೇರಿ ಆವರಣ ವೀರಾಜಪೇಟೆ, ಜೂನ್ 18 ರಂದು ಮಡಿಕೇರಿ ತಾಲ್ಲೂಕಿನ ತಾಲ್ಲೂಕು ಕಚೇರಿ ಆವರಣ ಮಡಿಕೇರಿ ಇಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರ ತಮ್ಮ ಅಹವಾಲುಗಳನ್ನು ಸಲ್ಲಿಸಲು ತಿಳಿಸಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share