ರಾಜಕೀಯ ನಿವೃತ್ತಿ ಹಾದಿಯಲ್ಲಿ ಎಸ್ ಎಮ್ ಕೃಷ್ಣ

130
Share

ವಯಸ್ಸಿನ ಕಾರಣದಿಂದಾಗಿ, ಬಿಜೆಪಿಯ ಹಿರಿಯ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ತಾವು ಕ್ರಮೇಣ ಸಾರ್ವಜನಿಕ ಜೀವನದಿಂದ ದೂರ ಸರಿಯುತ್ತಿದ್ದು ಸಕ್ರಿಯ ರಾಜಕೀಯದಿಂದ ನಿವೃತ್ತರಾಗಲಿದ್ದೇನೆ ಎಂದು ತಿಳಿಸಿದ್ದಾರೆ.
90 ವರ್ಷದ ಹಿರಿಯ ನಾಯಕರಾದ ಶ್ರೀ ಯುತರು ಮಾರ್ಚ್ 2017 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಕಾಂಗ್ರೆಸ್ ಜೊತೆಗಿನ ಸುಮಾರು 50 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದರು.
“ನನ್ನನ್ನು ಹೆಚ್ಚು (ಸಾರ್ವಜನಿಕವಾಗಿ) ನೋಡಿಲ್ಲ ಎಂಬ ಚರ್ಚೆಗಳು ನನಗೆ ಕೇಳಿಬಂದಿವೆ, ನಾವೆಲ್ಲರೂ ನಮ್ಮ ವಯಸ್ಸಿನ ಬಗ್ಗೆ ತಿಳಿದಿರಬೇಕು, 90 ನೇ ವಯಸ್ಸಿನಲ್ಲಿ ನಾವು ನಮ್ಮ 50 ರ ಹರೆಯದವರಂತೆ ವರ್ತಿಸಲು ಸಾಧ್ಯವಿಲ್ಲ. ವಯಸ್ಸಿನ ಅಂಶವನ್ನು ಗೌರವಿಸಿ, ನಾನು ಕ್ರಮೇಣ ಸಾರ್ವಜನಿಕ ಜೀವನದಿಂದ ದೂರ ಸರಿಯುತ್ತಿದ್ದೇನೆ ” ಎಂದು ಕೃಷ್ಣರವರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಳೇ ಮೈಸೂರಿನ ರಾಜಕೀಯದ ಬೆಳವಣಿಗೆಯಾಲಚಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೀರ ಎಂಬ ಪ್ರಶ್ನೆಗೆ ಅಂತಹ ಸಂದರ್ಭದಲ್ಲಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ.


Share