ವಿಲ್ ಪವರ್ ನಿಂದ ಬದುಕಿ ಡಾ. ನಟರಾಜ್ ಜೋಯಿಸ್

419
Share

 

ಮೈಸೂರು ಡಾ.ರಾಜಕುಮಾರ್ ಅವರು ಹೇಗೆ ನಾವು ಆತ್ಮಸ್ಥೈರ್ಯ, ವಿಲ್ ಪವರ್ ನಿಂದ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟವರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಒಕ್ಕೂಟದ ವಲಯ ಉಪಾಧ್ಯಕ್ಷರಾದ ಡಾ. ನಟರಾಜ್ ಜೋಯಿಸ್ ಅವರು ತಿಳಿಸಿದರು.
ಅವರು ಇಂದು ಬೆಳಗ್ಗೆ ಪತ್ರಕರ್ತರ ಸಂಘದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡದ ಕಣ್ಮಣಿ ಡಾ. ರಾಜ್ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದ ಅವರು ರಾಜಕುಮಾರ್,   ಅವರ ಬಳಿ ಇದ್ದ ಆತ್ಮಸ್ಥೈರ್ಯ ವಿಲ್ ಪವರ್ ಬಳಸಿಕೊಂಡು ಬದುಕಿನ ಬಗ್ಗೆ ಜೀವನದ ಬಗ್ಗೆ ತೋರಿಸಿಕೊಟ್ಟವರು ಎಂದ ಅವರು ಯಾವತ್ತೂ ಮನಿ ಪವರ್ ಸೇರಿದಂತೆ ಇತರೆ ಪವರ್ ಗಳನ್ನು ಅವರು ಸಮಾಜದ ಮುಂದೆ ಬಳಸಿಕೊಳ್ಳಲಿಲ್ಲ ಎಂದರು
ಇ೦ದಿನ ಸಮಾಜ ರಾಜಕುಮಾರ್ ಅವರು ಬದುಕಿದ ರೀತಿಯಲ್ಲಿ ಬದುಕುವ ಅವಶ್ಯಕತೆ ಇದೆ ಎಂದು ಜನತೆಗೆ ತಿಳಿಸಿದರು
ಅವರು ಮುಂದುವರೆದು ಮಾತನಾಡುತ್ತ ಬರೆಯುವುದಕ್ಕೆ ಹಕ್ಕಿದೆ ಎಂದು ಕೆಟ್ಟಕೆಟ್ಟದಾಗಿ ಬರೆಯುವುದಕ್ಕೆ ಹೋಗಬಾರದು ಕರೋನ ಸೋಂಕನ್ನು ಪ್ರಧಾನಿ ಅಥವಾ ಮುಖ್ಯಮಂತ್ರಿಗಳಾಗಲಿ ತರಲಿಲ್ಲ ಪುಣ್ಯವಂತರು ಹುಟ್ಟಿದ ಸ್ಥಳದಲ್ಲಿ ಪುಣ್ಯವಂತರು ಮಹಾತ್ಮರು ಹುಟ್ಟುತ್ತಾರೆ ಎಂಬುದಕ್ಕೆ ಡಾಕ್ಟರ್ ರಾಜಕುಮಾರ್  ಸಾಕ್ಷಿ ಎಂದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ತಿಳಿಸಿರುವ ಮಾರ್ಗಸೂಚಿಯನ್ನು ಹಾಗೂ ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ ಎಂದು ನಟರಾಜ್ ಜೋಯಿಸ್ಕ ಕರೆ ನೀಡಿದರು
   ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು  ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಸೇನಾಪಡೆಯ ಜಿಲ್ಲಾಧ್ಯಕ್ಷರಾದ ಅವರು ವಂದನಾರ್ಪಣೆ ಮಾಡಿದರು

Share