ಶಿವಮೊಗ್ಗದ ಉಪ್ಪಾರ್ ಕೇರಿ ಬಡಾವಣೆಯ ವೃತ್ತವೊಂದರಲ್ಲಿ ವೀರ ಸಾವರಕರ್ ಪೋಟೋ ಹಾಕಿದನ್ನು ತೆರವುಗೊಳಿಸುವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಪೊಲೀಸರು ಗುಂಪು ಚದುರಿಸಲು ಹರಸಾಹಸ ಮಾಡಬೇಕಾಯಿತು.ಉಪ್ಪಾರ ಕೇರಿ ಬಡಾವಣೆಯ ಪ್ರೇಮ್ ಸಿಂಗ್ ಎಂಬುವನಿಗೆ ಚಾಕು ಇರಿತವಾಗಿದೆ.ಅಶೋಕ್ ನಗರದಲ್ಲೂ ಸಹ ಮತ್ತೊಂದು ಚಾಕು ಇರಿತದ ಪ್ರಕರಣ ವರದಿಯಾಗಿದ್ದು ಪೊಲೀಸರು ಖಚಿತ ಪಡಿಸಬೇಕಿದೆ.ಶಿವಮೊಗ್ಗದ ಗಾಂಧಿಬಜಾರನ್ನು ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ಬಂದ್ ಮಾಡಲಾಗಿದೆ ಶಿವಮೊಗ್ಗದಾದ್ಯಂತ ಸೆಕ್ಷನ್ 144 ತಕ್ಷಣದಿಂದಲೇ ಜಾರಿಯಾಗಿದೆ.