ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ದೃಢ ಆಗಿರುವ ಬೆನ್ನಲ್ಲೇ ಕೆಲವು ಗಣ್ಯವ್ಯಕ್ತಿಗಳಿಗೆ ಆತಂಕ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಪ್ರಮುಖ ರಾಜಕಾರಣಿ, ಪ್ರಮುಖ ಮಠಾಧೀಶರು ಹಾಗೂ ನಟ ದೊಡ್ಡಣ್ಣ ಮತ್ತು ನಿರ್ಮಾಪಕರಾದ ವೆಂಕಟೇಶ್ ಮುಂತಾದವರೊಂದಿಗೆ ಕಳೆದ ಕೆಲವು ದಿನಗಳಿಂದ ಸುಮಲತಾ ಅವರು ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ಗಣ್ಯರು ಪರೀಕ್ಷೆಗೊಳಪಟ್ಟು ಸತ್ಯಾಂಶ ಹೊರ ಬರುವುದನ್ನು ಸಾರ್ವಜನಿಕರು ಕಾದುನೋಡಬೇಕಾಗಿದೆ.
ಸುಮಲತಾ ರವರು ಯಾರನ್ನ ಎಷ್ಟು ದಿನದ ಹಿಂದೆ ಭೇಟಿಯಾಗಿದ್ದರು ಎಂಬುದು ಬಹಳ ಮುಖ್ಯವಾಗಿರುತ್ತದೆ ಎನ್ನಲಾಗಿದೆ.