ಸ್ಯಾಂಟ್ರೋ ರವಿ ಆಸ್ತಿಪಾಸ್ತಿ ಮುಟ್ಟುಗೋಲು- ಮುಖ್ಯಮಂತ್ರಿ

225
Share

ಹುಬ್ಬಳ್ಳಿ. ರಾಜ್ಯದ ಪೊಲೀಸರಿಗೆ ಹಲವಾರು ಕೇಸುಗಳಲ್ಲಿ ಬೇಕಾಗಿರುವ ಸ್ಯಾಂಟ್ರೋ ರವಿಗೆ ಸೇರಿದ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ, ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಅವರು ಇಂದು ಬೆಳಗ್ಗೆ ಹುಬ್ಬಳ್ಳಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಕಾಲದಲ್ಲೇ ಸ್ಯಾಂಟ್ರೋ ರವಿ ಅವರ ಉಪಟಪಳ ಹೆಚ್ಚಾಗಿತ್ತು ಎಂದು ತಿಳಿಸಿದರು.

ಕಳೆದ 20 ವರ್ಷದಿಂದ ಸ್ಯಾಂಟ್ರೋ ರವಿ ಆರೋಪ ಎದುರಿಸುತ್ತಿರುವ ಇತಿಹಾಸ ಇದೆ ಎಂದರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಸ್ಯಾಂಟ್ರೋ ರವಿ ಜೈಲಿನಿಂದ ಹೊರ ಬಂದಿದ್ದಾನೆ ಎಂದು ತಿಳಿಸಿದ ಅವರು ಸ್ಯಾಂಟ್ರೋ ರವಿ ವಿಚಾರದಲ್ಲಿ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ.


Share