28/02/2022 ರ ಸರ್ಕಾರಿ ಅರ್ಜಿ ಆಹ್ವಾನ

302
Share

ವೃತಿ ಕೌಶಲ್ಯ ತರಬೇತಿ ಅರ್ಜಿ ಆಹ್ವಾನ
ರಾಮನಗರ: ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಸಮಗ್ರ ಶಿಕ್ಷಣ ಅಭಿಯಾನದ ವತಿಯಿಂದ ಶಾಲೆ/ಕಾಲೇಜು ಬಿಟ್ಟವರು ಹಾಗೂ ಅರ್ಧದಲ್ಲಿ ವ್ಯಾಸಾಂಗ ನಿಲ್ಲಿಸಿದ ಯುವ ಜನತೆಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಆಟೋಮೊಟಿವ್ ಸರ್ವಿಸ್ ಟೆಕ್ನಿಷಿಯನ್ ಹಾಗೂ ಬಯೋಮೆಟ್ರಿಕ್ ಡಾಟಾ ಎಂಟ್ರಿ ಆಪರೇಟರ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ೧೫-೨೯ ವಯೋಮಾನದವರಾಗಿರಬೇಕು, ಶಾಲೆ/ಕಾಲೇಜು ಅಥವಾ ಅರ್ಧದಲ್ಲಿ ವ್ಯಾಸಂಗ ನಿಲ್ಲಿಸಿದವರಾಗಿರಬೇಕು. ಆಸಕ್ತರು ಮಾರ್ಚ್ ೦೫ ರೊಳಗಾಗಿ ಜಾತಿ ಆದಾಯ ಪ್ರಮಾಣ ಪತ್ರ ಆಧಾರ್‌ಕಾರ್ಡ್ ಹಾಗೂ ೨ ಭಾವಚಿತ್ರಗಳ ಪ್ರತಿಯೊಂದಿಗೆ ರಾಮನಗರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಬೇಕೆಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೯೧೬೧೫೭೯೩೮, ೮೯೫೧೬೬೧೩೧೭ನ್ನು ಸಂಪರ್ಕಿಸಿ.

Share