ರಾಮನಗರ: ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಮತ್ತು ಸಮಗ್ರ ಶಿಕ್ಷಣ ಅಭಿಯಾನದ ವತಿಯಿಂದ ಶಾಲೆ/ಕಾಲೇಜು ಬಿಟ್ಟವರು ಹಾಗೂ ಅರ್ಧದಲ್ಲಿ ವ್ಯಾಸಾಂಗ ನಿಲ್ಲಿಸಿದ ಯುವ ಜನತೆಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಆಟೋಮೊಟಿವ್ ಸರ್ವಿಸ್ ಟೆಕ್ನಿಷಿಯನ್ ಹಾಗೂ ಬಯೋಮೆಟ್ರಿಕ್ ಡಾಟಾ ಎಂಟ್ರಿ ಆಪರೇಟರ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ೧೫-೨೯ ವಯೋಮಾನದವರಾಗಿರಬೇಕು, ಶಾಲೆ/ಕಾಲೇಜು ಅಥವಾ ಅರ್ಧದಲ್ಲಿ ವ್ಯಾಸಂಗ ನಿಲ್ಲಿಸಿದವರಾಗಿರಬೇಕು. ಆಸಕ್ತರು ಮಾರ್ಚ್ ೦೫ ರೊಳಗಾಗಿ ಜಾತಿ ಆದಾಯ ಪ್ರಮಾಣ ಪತ್ರ ಆಧಾರ್ಕಾರ್ಡ್ ಹಾಗೂ ೨ ಭಾವಚಿತ್ರಗಳ ಪ್ರತಿಯೊಂದಿಗೆ ರಾಮನಗರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಬೇಕೆಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೯೧೬೧೫೭೯೩೮, ೮೯೫೧೬೬೧೩೧೭ನ್ನು ಸಂಪರ್ಕಿಸಿ.
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...