ಚಿತ್ರ ಕೃಪೆ ಕೇರಳ ಮೈತಾಲಜಿ
ಕಳೆದ ನವೆಂಬರ್ 16 ರಿಂದ ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಎರಡು ವರ್ಷಗಳ ಕರೋನ ನಿರ್ಭಂಧದ ನಂತರ ಇದೀಗ ಅಲ್ಲಿಗೆ ಬರುತ್ತಿರುವ ಭಕ್ತರ ಸಮೂಹ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಸೋಮವಾರದವರೆಗೆ ಸುಮಾರು ಮೂರು ಲಕ್ಷ ಭಕ್ತರು ಭೇಟಿ ನೀಡಿದ್ದು ಜನಸಂದಣಿ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ ಬೆಳಿಗ್ಗೆ 3 ರಿಂದ ಮಧ್ಯಾಹ್ನ1, ಸಂಜೆ 4 ರಿಂದ 11 ಗಂಟೆಯವರೆಗೆ ಇದ್ದ ದರ್ಶನ ಸಮಯವನ್ನು ಮಧ್ಯಾಹ್ನ 3 ರಿಂದ 11 ರವರೆಗೆ ಅಂದರೆ ಒಂದು ಗಂಟೆ ಕಾಲ ಹೆಚ್ಚಿನ ಅವಕಾಶ ನೀಡಲು ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.