ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 17
ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .
ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )
ಇಂದಿನ ನಾಮಾವಳಿಗಳು :
86. ಓಂ ಕುಲಪಾಲನಾಯ ನಮಃ
87. ಓಂ ಕಿರೀಟಿನೇ ನಮಃ
88. ಓಂ ಕುಂಡಲಿನೇ ನಮಃ
89. ಓಂ ಹಾರಿಣೇ ನಮಃ
90. ಓಂ ವನಮಾಲಿನೇ ನಮಃ
86 . ಓಂ ಕುಲಪಾಲನಃ : –
ಭಾಷ್ಯ :
ವಂಶಸ್ಯ ಕೌಲತಂತ್ರಸ್ಯಾಪ್ಯವನಾತ್ ಕುಲಪಾಲನಃ ।
ಎಲ್ಲರ ವಂಶಗಳನ್ನೂ , ಕೌಳತಂತ್ರವನ್ನೂ ಕಾಪಾಡುವುದರಿಂದ ಗಣೇಶನು ಕುಲಪಾಲನನು .
ಓಂ ಕುಲಪಾಲನಾಯನಮಃ
ಕಿರೀಟೀ ಕುಂಡಲೀ ಹಾರೀ ವನಮಾಲೀ ಮನೋಮಯಃ |
ವೈಮುಖ್ಯ ಹತ ದೈತ್ಯ ಶ್ರೀ ಪಾದಾಹತಿ ಜಿತ ಕ್ಷಿತಿಃ ||
87 . ಓಂ ಕಿರೀಟೀ : –
ಭಾಷ್ಯ :
ಕಿರೀಟೀ ಮೌಲಿಭೂಷಾವಾನಥವಾ ೭ ರ್ಜುನ ರೂಪಧೃಕ್ ।
ಕಿರೀಟವನ್ನು ಶಿರಸ್ಸಿನಲ್ಲಿ ಅಲಂಕಾರವಾಗಿ ಇರಿಸಿಕೊಂಡಿದ್ದರಿಂದಲೂ , ಅರ್ಜುನನ ರೂಪವನ್ನು ಧರಿಸಿದ್ದರಿಂದಲೂ , ಗಣೇಶನು ಕಿರೀಟಿ , ( ಪಾಂಡವರಲ್ಲಿ ಮಧ್ಯಮನಾದ ಅರ್ಜುನನಿಗೆ ಕಿರೀಟಿ ಎಂಬುದು ಬಿರುದು ನಾಮ )
ಓಂ ಕಿರೀಟಿನೇ ನಮಃ
88 . ಓಂ ಕುಂಡಲೀ : –
ಭಾಷ್ಯ :
ಕುಂಡಲೀ ಕರ್ಣಭೂಷಾವಾನಥವಾ ಶೇಷರೂಪಧೃಕ್ ।
ಕಿವಿಗಳಿಗೆ ಕುಂಡಲಗಳು ಆಭರಣಗಳಾಗಿರುವುದರಿಂದಲೂ ಆದಿಶೇಷನ ರೂಪವನ್ನು ತಾಳಿದ್ದರಿಂದಲೂ ಗಣೇಶನು ಕುಂಡಲೀ .
ಓಂ ಕುಂಡಲಿನೇ ನಮಃ
89 . ಓಂ ಹಾರೀ : –
ಭಾಷ್ಯ :
ಹಾರೀಮುಕ್ತಾದಿ ಮಾಲಾಧೃಗಥವಾ ೭ ತ್ಯಂತ ಸುಂದರಃ |
ಮುತ್ತಿನ ಸರಕ್ಕೆ ಹಾರ ಎಂದು ಹೆಸರು . ಹಾರಗಳಿಂದ ಅಲಂಕರಿಸಿ ಕೊಂಡಿರುವುದರಿಂದಲೂ ಬಹಳ ಸುಂದರವಾಗಿದ್ದು ಮನಸ್ಸನ್ನು ಸೂರೆಗೊಳ್ಳುವುದರಿಂದಲೂ ಹಾರೀ ಎನಿಸಿಕೊಳ್ಳುತ್ತಾನೆ .
ಓಂ ಹಾರಿಣೇ ನಮಃ
90 . ಓಂ ವನಮಾಲೀ : –
ಭಾಷ್ಯ :
ವನಮಾಲೀ ದಧಾತೋಷ ಮಾಲಾಮಾಪಾದಲಂಬಿನೀಮ್ |
ತಲೆಯಿಂದ ಅಥವಾ ಕಂಠದಿಂದ ಪಾದದವರೆಗೂ ನೇತಾಡುವ ಪುಷ್ಪಮಾಲೆಗಳನ್ನು ಧಾರಣೆಮಾಡಿರುವುದರಿಂದ ವನಮಾಲೀ .
ಓಂ ವನಮಾಲಿನೇ ನಮಃ
( ಮುಂದುವರೆಯುವುದು )
( ಸಂಗ್ರಹ )
* ಭಾಲರಾ
ಬೆಂಗಳೂರು